ಶಿವಮೊಗ್ಗ: ಮಹಾರಾಷ್ಟ್ರದಿಂದ ಬಂದ ಒಬ್ಬರು ಸೇರದಿಂತೆ ಜಿಲ್ಲೆಯನಾಲ್ವರಿಗೆ ಕೊರೊನಾ ಸೋಂಕು ಇರುವುದು ಮಂಗಳವಾರದೃಢಪಟ್ಟಿದೆ.
58 ವರ್ಷದ ಪುರುಷ (ಪಿ–5824), 48 ವರ್ಷದ ಪುರುಷ (ಪಿ–5825), 27 ವರ್ಷದ ಯುವಕ (ಪಿ–5826) ಹಾಗೂ 25 ವರ್ಷದ (ಪಿ–5827)ಯುವಕನಿಗೆ ಕೊರೊನಾ ವೈರಸ್ ತಗುಲಿದೆ. ಮೂವರ ಪ್ರವಾಸದ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ. ಬೆಂಗಳೂರಿಗೆ ಬಂದೋಬಸ್ತ್ಗೆ ತೆರಳಿ ಮರಳಿಬಂದ ಕೆಎಸ್ಆರ್ಪಿ ಪೊಲೀಸರ ಸಂಪರ್ಕದಿಂದ ಮೂವರಿಗೆ ಕೊರೊನಾ ಸೋಂಕು ತಗುಲಿರುವು ಶಂಕೆ ಇದೆ.
ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 73ಕ್ಕೇ ಏರಿಕೆಯಾಗಿದೆ. ಮಂಗಳವಾರ ಮೂವರು ಸೇರದಿಂತೆ ಇದುವರೆಗೂ 31 ಜನರು ಗುಣಮುಖರಾಗಿದ್ದಾರೆ. 42 ಜನರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.