ADVERTISEMENT

ದುರಸ್ತಿ ಕಾಣದ ರಸ್ತೆ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 3:18 IST
Last Updated 24 ಡಿಸೆಂಬರ್ 2020, 3:18 IST
ಸೊರಬ ತಾಲ್ಲೂಕಿನ ಕಾನಗೋಡು ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸುವುದಾಗಿ ಬುಧವಾರ ಪ್ರತಿಭಟನೆ ನಡೆಸಿದರು
ಸೊರಬ ತಾಲ್ಲೂಕಿನ ಕಾನಗೋಡು ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸುವುದಾಗಿ ಬುಧವಾರ ಪ್ರತಿಭಟನೆ ನಡೆಸಿದರು   

ಸೊರಬ: ತಾಲ್ಲೂಕಿನ ನಿಸರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಗೋಡು ಗ್ರಾಮದ ಬಳಿ ಹಾದು ಹೋಗುವ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ರಸ್ತೆ ದುರಸ್ತಿಗೆ ಒತ್ತಾಯಿಸಿ ಬುಧವಾರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮದ ರಾಘವೇಂದ್ರ, ‘ಈ ರಸ್ತೆ ಸೊರಬ–ಸಾಗರ ಮುಖ್ಯರಸ್ತೆಯಿಂದ ನಿಸರಾಣಿ, ಮಾಸೂರು ಮಾರ್ಗವಾಗಿ ತಾಳಗುಪ್ಪ ಸೇರುತ್ತದೆ. ಕುಪ್ಪೆಯಿಂದ ನಿಸರಾಣಿವರೆಗೂ ರಸ್ತೆ ಸಂಪೂರ್ಣ ಹಾಳಾಗಿದೆ. ನಾಲ್ಕು ವರ್ಷಗಳಿಂದ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ‌ಪ್ರಯೋಜನವಾಗಿಲ್ಲ. ಇದರಿಂದ ಡಿ. 27ರಂದು ನಡೆಯುವ ಗ್ರಾಮ ಪಂಚಾಯಿತಿ ಮತದಾನ ಬಹಿಷ್ಕರಿಸಲು ಗ್ರಾಮಸ್ಥರು ಒಮ್ಮತದಿಂದ ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಗ್ರಾಮಸ್ಥರಾದ ಬಸವರಾಯ್ ನಾಯಕ್, ರಮೇಶ್, ರಾಜು, ಪ್ರಕಾಶ್, ಕನ್ನಪ್ಪ, ರಾಘವೇಂದ್ರ ಮಂಜಪ್ಪ ಪಿ., ಹೇಮರಾಜ್, ಉಮೇಶ್, ಹುಚ್ಚಪ್ಪ, ಎಚ್. ಮಂಜಪ್ಪ ಪರಶುರಾಮ, ಸುಶೀಲಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.