ADVERTISEMENT

ಭದ್ರಾ ಜಲಾಶಯ: ಇಂದು ತುಂಗಭದ್ರಾ ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 15:32 IST
Last Updated 15 ಜೂನ್ 2019, 15:32 IST

ಶಿವಮೊಗ್ಗ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಜೂನ್‌ 16ರಿಂದ 1.382 ಟಿಎಂಸಿ ಅಡಿ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮ ಸೂಚಿಸಿದೆ.

ದಾವಣಗೆರೆ, ಹಾವೇರಿ ಜಿಲ್ಲಾಡಳಿತಗಳ ಕೋರಿಕೆಯಂತೆನದಿ ಪಾತಗಳ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ಕುಡಿಯುವ ನಿರಿನ ಯೋಜನೆಗಳಿಗೆ ನೀರು ಪೂರೈಸಲು ಜೂನ್ 16ರಿಂದ 26ರವರೆಗೆ ಪ್ರತಿ ದಿನ 1,600 ಕ್ಯುಸೆಕ್‌ ನೀರು ಹರಿಸಲಾಗುತ್ತದೆ.ನದಿ ತೀರದ ಜನರು ಜಾಗೃತೆ ವಹಿಸಬೇಕು ಎಂದು ನಿಗಮದ ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT