ADVERTISEMENT

ಹೊಸನಗರ | ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 21:15 IST
Last Updated 20 ಜುಲೈ 2025, 21:15 IST
ಬೆಂಗಳೂರಿನ ನಾಗರಬಾವಿಯ ರಮೇಶ್, ಜಲಪಾತ ಸಮೀಪದ ಕಲ್ಲುಬಂಡೆ ಮೇಲೆ ಕೂತಿರುವುದು
ಬೆಂಗಳೂರಿನ ನಾಗರಬಾವಿಯ ರಮೇಶ್, ಜಲಪಾತ ಸಮೀಪದ ಕಲ್ಲುಬಂಡೆ ಮೇಲೆ ಕೂತಿರುವುದು   

ಹೊಸನಗರ : ತಾಲ್ಲೂಕಿನ ಯಡೂರು ತಲಾಸಿ ಅಬ್ಬಿ ಜಲಪಾತದ ಗುಂಡಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಭಾನುವಾರ ಮೃತಪಟ್ಟಿದ್ದಾರೆ. 

ಬೆಂಗಳೂರಿನ ನಾಗರಬಾವಿಯ ರಮೇಶ್ (35) ಸಾವಿಗೀಡಾದವರು. ಇವರು ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದರು.

ನಾಲ್ವರು ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆ ರಮೇಶ್ ಬಂದಿದ್ದರು. ಫೋಟೊ ತೆಗೆಯಲು ಸ್ನೇಹಿತರಿಗೆ ಹೇಳಿ, ಜಲಪಾತದ ಗುಂಡಿಗೆ ಇಳಿದ ವೇಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೃತದೇಹ ಜಲಪಾತದ ಕೆಳಭಾಗದಲ್ಲಿ ಪತ್ತೆಯಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.