ಶಿವಮೊಗ್ಗ: ನಗರದಲ್ಲಿ ಫೆ.25ರಿಂದ ಆರಂಭವಾಗುವಮಾರಿಕಾಂಬ ಜಾತ್ರೆಗೆ ಬಂಧುಗಳನ್ನು ಕರೆಯಲು ಹೋಗಿದ್ದ ಯುವಕರು ಸೋಮವಾರ ಸಂಜೆ ಲಕ್ಕವಳ್ಳಿ–ಬಿಆರ್ಪಿ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶಿವಮೊಗ್ಗದ ನವುಲೆಯ ಮೋಹನ್, ಕುಮಾರ್ಮೃತ ಯುವಕರು.ಬೈಕ್ನಲ್ಲಿ ತೆರಳುತ್ತಿದ್ದ ಅವರು ಎದುರಿಗೆ ಬರುತ್ತಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದುಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಣಸವಳ್ಳಿ ಸಮೀಪ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆನಡೆಯಿತು.ಅಫಘಾತದಲ್ಲಿ ದೇಹಗಳುಛಿದ್ರವಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಪ್ರತಿಭಟನೆ: ಯುವಕರ ಸಾವಿಗೆ ಪೊಲೀಸರೇ ಕಾರಣ. ದಂಡದ ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇಂತಹ ಅವಘಡ ನಡೆದಿದೆ ಎಂದು ಆರೋಪಿಸಿ ಸ್ಥಳೀಯರು ಲಕ್ಕವಳ್ಳಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.