ADVERTISEMENT

ಮೊಬೈಲ್ ಚಟ; ಸಂವೇದನೆಗೆ ದೂರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:40 IST
Last Updated 19 ಮಾರ್ಚ್ 2014, 6:40 IST

ತಿಪಟೂರು: ಅತಿಯಾದ ಇಂಟರ್ನೆಟ್ ಬಳಕೆ ಮತ್ತು ಮೊಬೈಲ್ ಚಟದಿಂದ ಯುವ ಜನತೆ ಸಹಜ ವರ್ತನೆ ಹಾಗೂ ಸಂವೇ­ದನೆ ಕಳೆದುಕೊಳ್ಳುತ್ತಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಸುಜಯಾ ಕಳವಳ ವ್ಯಕ್ತಪಡಿಸಿದರು.

ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗವು ಆಯೋಜಿಸಿರುವ ‘ಯುವ ಜನತೆಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಚಟದ ಮನೋ ವೈಜ್ಞಾನಿಕ ಪರಿ­ಣಾಮ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂಟರ್ನೆಟ್ ಮತ್ತು ಮೊಬೈಲ್‌­ನಲ್ಲಿ ಹೆಚ್ಚಾಗಿ ಮುಳುಗುವ ಜನರು ಮಾನವ ಸಹಜ ಸಾಮಾಜಿಕ ಸಂಬಂಧವನ್ನು ದೂರ ಮಾಡಿಕೊಳ್ಳುವ ಅಪಾಯವಿರುತ್ತದೆ ಎಂದರು.

ಮನಃಶಾಸ್ತ್ರಜ್ಞೆ ಡಾ.ಪ್ರೀತಿ ಪೈ ಅವೈಜ್ಞಾನಿಕ ಮೊಬೈಲ್ ಬಳಕೆ ಅನಾಹುತದ ಬಗ್ಗೆ ಮಾತನಾಡಿದರು.

ಬಿಡಿಎ ಸಹಾಯಕ ಆಯುಕ್ತ ಎಂ.ಎಸ್.ಎನ್. ಬಾಬು, ಕಲ್ಪತರು ವಿದ್ಯಾಸಂಸ್ಥೆ ಪದಾಧಿಕಾರಿ­ಗಳಾದ ಶಿವಸ್ವಾಮಿ, ಜಗದೀಶ ಮೂರ್ತಿ, ರುದ್ರಮುನಿಸ್ವಾಮಿ, ಕೆಐಟಿ ಪ್ರಾಂಶುಪಾಲ ಡಾ. ಶಶಿಧರ್, ಅಡವಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಸೈಯದ್ ಮುಸ್ತಾಕ್ ಅಹಮದ್, ಮನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವಿ.ಎನ್.ಬಸವರಾಜಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.