ADVERTISEMENT

ಸ್ವಾರ್ಥಕ್ಕೆ ಜಾತಿ, ಧರ್ಮ ಬಳಸಿದರೆ ಅಶಾಂತಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 5:48 IST
Last Updated 2 ಡಿಸೆಂಬರ್ 2017, 5:48 IST

ಗುಬ್ಬಿ: ‘ಸ್ವಾರ್ಥಕ್ಕೆ ಜಾತಿ-ಧರ್ಮಗಳನ್ನು ಬಳಸಿಕೊಂಡರೆ ಸಮಾಜದಲ್ಲಿ ಅಶಾಂತಿ ಆವರಿಸಲಿದೆ’ ಎಂದು ನೊಣವಿನಕೆರೆಯ ಕರಿವೃಷಭ ದೇಶೀಕೇಂದ್ರ ಶೀವಯೋಗೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಸಂತೆ ಆವರಣದಲ್ಲಿ ಈಚೆಗೆ ಅಭಯ ಆಂಜನೇಯ ಸ್ವಾಮಿಯ ರಜತ ಕವಚ ಧಾರಣೆ ಹಾಗೂ ವಿಮಾನಗೋಪುರ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪ್ರಾಚೀನತೆ ಹೊಂದಿರುವ ಧರ್ಮಗಳಲ್ಲಿ ವೀರಶೈವ ಧರ್ಮವೂ ಒಂದು. ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ವೈಯುಕ್ತಿಕ ಬೆಳವಣಿಗೆಗೆ ಸಮಾಜವನ್ನು ಬಳಸಿಕೊಂಡರೆ ಧರ್ಮದಲ್ಲಿನ ಶ್ರದ್ಧೆ, ಶಿಸ್ತು ನಾಶವಾಗಲಿದೆ’ ಎಂದು ಹೇಳಿದರು.

ಸಾಹಿತ್ಯ ಚಿಂತಕ ಎಚ್.ಕೆ.ನರಸಿಂಹಮೂರ್ತಿ ಮಾತನಾಡಿ, ‘ಶತಮಾನಗಳ ಇತಿಹಾಸ ವೀರಶೈವ ಧರ್ಮಕ್ಕೆ ಇದೆ. ಇತ್ತಿಚೇಗೆ ಕೆಲ ರಾಜಕೀಯ ಮುಖಂಡರು ಸಮಾಜದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಕೆಲವರು ಸಭೆ ಸಮಾರಂಭಗಳಲ್ಲಿ ಹೇಗೆ ಬೇಕೋ ಹಾಗೆ ಮಾತನಾಡಿ, ಸಮಾಜದ ನೆಮ್ಮದಿ ಹಾಳುಮಾಡುತ್ತಿದ್ದಾರೆ’ ಎಂದರು.

ADVERTISEMENT

ತೆವಡೇಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ತೊರೇಮಠದ ರಾಜಶೇಖರ ಸ್ವಾಮೀಜಿ, ಶಾಸಕ ಎಸ್.ಆರ್.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ಮೋಹನ್, ಕಮಲಮ್ಮ, ರೂಪಾ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ ಕುಮಾರ್, ನಾರಾಯಣ್, ಸುರೇಶ್, ಗೋವಿಂದಪ್ಪ, ಪಟೇಲ್ ಕೆಂಪೇಗೌಡ, ಮಾರುತೇಶ್, ರಾಮಚಂದ್ರಪ್ಪ, ರಂಗನಾಥ್, ಶಿವಕುಮಾರ್, ರವೀಶ್, ಗಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.