ಶಿರಾ: ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಹುದ್ದೆ ಪಡೆಯಲು ಬಿಜೆಪಿಗೆ ₹1.5 ಕೋಟಿ ಲಂಚ ನೀಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ತಹಶೀಲ್ದಾರ್ ರಘುಮೂರ್ತಿ ಅಮಾನತಿನ ಸುದ್ದಿ ಪ್ರಸ್ತಾಪಿಸಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ರಘುಮೂರ್ತಿ ಅವರನ್ನು ನನ್ನ ಬಳಿ ಕರೆತಂದು ಯಲಹಂಕ ತಹಶೀಲ್ದಾರರಾಗಿ ನೇಮಿಸಿದರೆ ₹ 1 ಕೋಟಿ ನೀಡುತ್ತಾರೆ ಎಂದು ಹೇಳಿದ್ದರು.
‘ಇವರು ಭ್ರಷ್ಟಾಚಾರದಿಂದ ಹಣ ಗಳಿಸುತ್ತಾರೆ. ಇಂತಹದನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸುವುದು ಬೇಡ. ಇನ್ನು ಮುಂದೆ ಇಂತಹವರನ್ನು ಕರೆತರಬೇಡ ಎಂದು ಕಾರ್ಯಕರ್ತನಿಗೆ ಬುದ್ಧಿ ಹೇಳಿ ಕಳುಹಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ₹1.5 ಕೋಟಿ ನೀಡಿ ಹುದ್ದೆ ಪಡೆದಿದ್ದ ರಘುಮೂರ್ತಿ ಈಗ ₹ 150 ಕೋಟಿ ಅವ್ಯವಹಾರ ನಡೆಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.