ADVERTISEMENT

ಕ್ಯಾಂಟರ್ ಚಾಲಕನ ಥಳಿಸಿ ₹ 3 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 3:04 IST
Last Updated 10 ಸೆಪ್ಟೆಂಬರ್ 2020, 3:04 IST

ಕುಣಿಗಲ್: ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಸೇತುವೆ ಬಳಿ ಬುಧವಾರ ಮುಂಜಾನೆ ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಸರಕು ಸಾಗಣೆ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನಿಗೆ ಥಳಿಸಿ ₹ 3 ಲಕ್ಷ ದೋಚಿ ಪರಾರಿಯಾಗಿದ್ದಾರೆ.

ಹಾಸನ ಜಿಲ್ಲೆಯ ಕಟ್ಟಾಯ ಗ್ರಾಮದ ಶನೇಶ್ವರ ಅವರು ನಿತ್ಯ ಕ್ಯಾಂಟರ್‌ನಲ್ಲಿ ಹಾಸನದಿಂದ ಬೆಂಗಳೂರಿಗೆ ಹನುಮಾನ್ ಪಾರ್ಸೆಲ್ ಕಚೇರಿಯಿಂದ ಸರಕು ಸಾಗಣೆ ಮಾಡುತ್ತಿದ್ದರು. ಹಾಸನದ ಶಿವಾಜಿ ಅವರಿಗೆ ಸೇರಬೇಕಾದ ₹ 3 ಲಕ್ಷ ಪಡೆದುಕೊಂಡು ಹಾಸನಕ್ಕೆ ಹಿಂತಿರುಗುವಾಗ ಗವಿಮಠ ಸೇತುವೆ ಬಳಿ ಬೆಂಗಳೂರಿನಿಂದ ಓಮ್ನಿ ಕಾರಿನಲ್ಲಿ ಬಂದ ಐದು ಮಂದಿ ದುಷ್ಕರ್ಮಿಗಳು ಕ್ಯಾಂಟರ್ ಅಡ್ಡಗಟ್ಟಿ ಚಾಲಕನಿಗೆ ಚಾಕುವಿನಿಂದ ಚುಚ್ಚಿ, ಥಳಿಸಿ ಹಣ ಕಿತ್ತು ಪರಾರಿಯಾಗಿದ್ದಾರೆ.

ಈ ಬಗ್ಗೆ ಶನೇಶ್ವರ ನೀಡಿರುವ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.