ತುಮಕೂರು: ಜಾನುವಾರುಗಳಿಗೆ ಮೇವು ತರಲು ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಂಗಳವಾರ ಮಧುಗಿರಿ ತಾಲ್ಲೂಕಿನ ಯರಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಐ.ಡಿ.ಹಳ್ಳಿ ಹೋಬಳಿಯ ಯರಮಲ್ಲೇನಹಳ್ಳಿ ನಿವಾಸಿ ಶ್ರೀರಾಮರೆಡ್ಡಿ (45) ಕರಡಿ ದಾಳಿಗೆ ಒಳಗಾದ ರೈತ.
ರೈತನ ಚೀರಾಟ ಕೇಳಿಸಿಕೊಂಡು ಅಕ್ಕ, ಪಕ್ಕದ ರೈತರು ಬಂದು ಕರಡಿಯನ್ನು ಓಡಿಸಿ, ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ವಲಯ ಅರಣ್ಯಾಧಿಕಾರಿ ರವಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.