ತುಮಕೂರು: ದೇವರಾಯನದುರ್ಗ ಮತ್ತು ನಾಮದ ಚಿಲುಮೆ ಪ್ರವಾಸಿ ತಾಣಗಳ ಮಾರ್ಗದಲ್ಲಿರುವ ಸಿದ್ಧಗಂಗಾ ಮಠದ ಕ್ರಾಸ್ನ ಪ್ರಯಾಣಿಕರ ತಂಗುದಾಣದಲ್ಲಿ ಕರಡಿ ಮಲಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ದಾರಿಯಲ್ಲಿ ಜನದಟ್ಟಣೆ ಹೆಚ್ಚು. ಕೊರಟಗೆರೆ, ಉರ್ಡಿಗೆರೆ, ಗೊರವನಹಳ್ಳಿಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ.
ರಾತ್ರಿಯಾದರೂ ಈ ರಸ್ತೆಯಲ್ಲಿ ಜನ ಸಂಚಾರ ಇರುತ್ತದೆ.
ಇತ್ತೀಚೆಗೆ ಇಲ್ಲಿಗೆ ಸಮೀಪದ ಬೆಳಗುಂಬ ಗ್ರಾಮದಲ್ಲಿ ಸಂಜೆಯೇ ಕರಡಿ ಪ್ರತ್ಯಕ್ಷವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.