ADVERTISEMENT

ಭಗೀರಥ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 4:33 IST
Last Updated 20 ಮೇ 2021, 4:33 IST
ಕೊಡಿಗೇನಹಳ್ಳಿ ಹೋಬಳಿ ಸೂರನಾಗೇನಹಳ್ಳಿಯಲ್ಲಿ ಬುಧವಾರ ಉಪ್ಪಾರ ಸಮುದಾಯದಿಂದ ಭಗೀರಥ ಜಯಂತಿ ಆಚರಿಸಲಾಯಿತು
ಕೊಡಿಗೇನಹಳ್ಳಿ ಹೋಬಳಿ ಸೂರನಾಗೇನಹಳ್ಳಿಯಲ್ಲಿ ಬುಧವಾರ ಉಪ್ಪಾರ ಸಮುದಾಯದಿಂದ ಭಗೀರಥ ಜಯಂತಿ ಆಚರಿಸಲಾಯಿತು   

ಕೊಡಿಗೇನಹಳ್ಳಿ: ಉಪ್ಪಾರ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರ ಈ ಸಮುದಾಯಕ್ಕೆ ಹೆಚ್ಚು ರಾಜಕೀಯ ಪ್ರಾಧಾನ್ಯ ನೀಡಬೇಕು ಎಂದು ದೊಡ್ಡಮಾಲೂರು ಗ್ರಾಮ ಪಂಚಾಯಿತಿ ಸದಸ್ಯ ಅಶ್ವತ್ಥನಾರಾಯಣ ಒತ್ತಾಯಿಸಿದರು.

ದೊಡ್ಡಮಾಲೂರು ಗ್ರಾಮ ಪಂಚಾಯಿತಿಯ ಸೂರನಾಗೇನಹಳ್ಳಿಯಲ್ಲಿ ಬುಧವಾರ ಉಪ್ಪಾರ ಸಮುದಾಯದವರು ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಯಾವುದೇ ಸರ್ಕಾರ ಬಂದರೂ ಮೊದಲಿನಿಂದಲೂ ಉಪ್ಪಾರ ಸಮುದಾಯವನ್ನು ಕಡೆಗಣಿಸುತ್ತ ಬಂದಿವೆ. ಆದ್ದರಿಂದ ಯಾವುದೇ ಪಕ್ಷವಾದರೂ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದರು.

ADVERTISEMENT

ಮುಖಂಡ ಹನುಮಂತ, ವೆಂಕಟೇಶ್, ಅಶ್ವತ್ಥಪ್ಪ, ಸಿದ್ದಪ್ಪ, ಲಕ್ಷ್ಮಿನಾರಾಯಣ, ನರಸಿಂಹಮೂರ್ತಿ, ಸಣ್ಣಪ್ಪ, ಸುರೇಶ್, ಎಸ್.ಜಿ. ನರಸಿಂಹಮೂರ್ತಿ, ಶರತ್ ಬಾಬು, ಆನಂದ, ನರಸಿಂಹಪ್ಪ, ರವಿಕುಮಾರ್, ಲಕ್ಷ್ಮಿಪತಿ, ಲಕ್ಕಿ, ರವಿಚಂದ್ರ, ಮಂಜುನಾಥ್, ಸುಧಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.