ADVERTISEMENT

ಈಜಲು ಹೋದ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 10:40 IST
Last Updated 17 ನವೆಂಬರ್ 2019, 10:40 IST
ವಿನಯ್‌
ವಿನಯ್‌   

ಚಿಕ್ಕನಾಯಕನಹಳ್ಳಿ: ಹೊಯ್ಸಳಕಟ್ಟೆ ಗ್ರಾಮದ ಎಚ್.ಜಿ.ವಿನಯ್ (15) ಶುಕ್ರವಾರ ಗ್ರಾಮದ ಕಲ್ಲುಬಾವಿಯಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಗೋಪಾಲಕೃಷ್ಣ ಹಾಗೂ ಕವಿತಾ ದಂಪತಿ ಪುತ್ರ ವಿನಯ್ ಬೋರನಕಣಿವೆ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. ಶುಕ್ರವಾರ ಬೆಳಿಗ್ಗೆ ಶಾಲೆಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದ. ಬ್ಯಾಗ್ ಇಟ್ಟು ಈಜಲು ತೆರಳಿದ್ದ ಎಂದು ಕುಟುಂಬದವರು
ತಿಳಿಸಿದ್ದಾರೆ.

ಗೋಪಾಲಕೃಷ್ಣ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಂತಿಮ ದರ್ಶನ
ಪಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.