ಪಾವಗಡ: ತಾಲ್ಲೂಕಿನ ಟಿ.ಎನ್. ಪೇಟೆ ಬಳಿ ಭಾನುವಾರ ರಾತ್ರಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದ ಆಟೊಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೊದಲ್ಲಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಚಳ್ಳಕೆರೆ ತಾಲ್ಲೂಕು ಗೌರಿಪುರದ ವರ್ಷಿತ್ ರೆಡ್ಡಿ(13) ಮೃತಪಟ್ಟಿದ್ದಾನೆ.
ಗೌರಿಪುರದ ಸುಧಾ (51), ಜಶ್ವಂತ್(15), ನಾರಾಯಣಮ್ಮ (50), ನಾರಾಯಣಪ್ಪ(50) ಹಾಗೂ ಪಾವಗಡ ತಾಲ್ಲೂಕಿನ ಜೆ. ಅಚ್ಚಮ್ಮನಹಳ್ಳಿ ಭರತ್(16) ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ವರ್ಷಿತ್ ರೆಡ್ಡಿ ಕುಟುಂಬದವರು ಆಂಧ್ರದ ಅನಂತಪುರ ಜಿಲ್ಲೆಯ ರೊದ್ದಂ ಮಂಡಲಂ ಶೇಷಾಪುರಕ್ಕೆ ಸಂಕ್ರಾಂತಿ ಆಚರಣೆಗೆ ಹೋಗಿದ್ದು ಹಬ್ಬ ಮುಗಿಸಿಕೊಂಡು ರೊದ್ದಂನಿಂದ ಪಟ್ಟಣಕ್ಕೆ ಆಟೊದಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಟಿ.ಎನ್. ಪೇಟೆ ಬಳಿ ನಿಲ್ಲಿಸಿದ್ದ ಆಟೊಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ವರ್ಷಿತ್ ರೆಡ್ಡಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಕಾರು ಚಾಲಕ ಪರಾರಿಯಾಗಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.