ADVERTISEMENT

ವೈ.ಎನ್.ಹೊಸಕೋಟೆ ತಲುಪಿದ ತಬ್ಲಿಗಿಗಳ ಬ್ಯಾಗ್

​ಪ್ರಜಾವಾಣಿ ವಾರ್ತೆ
Published 10 ಮೇ 2020, 16:41 IST
Last Updated 10 ಮೇ 2020, 16:41 IST
ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆಗೆ ತಬ್ಲಿಘಿಗಳ ಬ್ಯಾಗ್ ಗಳನ್ನು ತರಲಾದ ಕಾರ್ ಅನ್ನು ಅಧಿಕಾರಿಗಳ ಸಮ್ಮುಖದಲ್ಲಿ ಭಾನುವಾರ ಸ್ವಚ್ಚಗೊಳಿಸುತ್ತಿರುವುದು.
ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆಗೆ ತಬ್ಲಿಘಿಗಳ ಬ್ಯಾಗ್ ಗಳನ್ನು ತರಲಾದ ಕಾರ್ ಅನ್ನು ಅಧಿಕಾರಿಗಳ ಸಮ್ಮುಖದಲ್ಲಿ ಭಾನುವಾರ ಸ್ವಚ್ಚಗೊಳಿಸುತ್ತಿರುವುದು.   

ಪಾವಗಡ: ಪಟ್ಟಣದಲ್ಲಿ ಕ್ವಾರಂಟೈನ್‌ನಲ್ಲಿರುವ ತಬ್ಲಿಗಿಗಳ ಬ್ಯಾಗ್‌ಗಳನ್ನು ವೈ.ಎನ್.ಹೊಸಕೋಟೆಯಲ್ಲಿರುವ ಅವರ ಮನೆಗಳಿಗೆ ವ್ಯಕ್ತಿಯೊಬ್ಬರು ಕಾರ್‌ನಲ್ಲಿ ತಲುಪಿಸಿದ್ದಾರೆ. ಇದು ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ.

ಬಾಲಕಿಯೊಬ್ಬಳು ಬ್ಯಾಗ್ ನೋಡಿ ತಂದೆ ಜಮಾತ್‌ಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್ ಇದು ಎಂದು ಸಂಭ್ರಮಿಸಿದ್ದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ತಬ್ಲಿಗಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬ್ಯಾಗ್‌ಗಳನ್ನು ತಂದಿದ್ದ ಕಾರ್ ಸ್ವಚ್ಛಗೊಳಿಸಿ ಬ್ಯಾಗ್‌ ಒಂದನ್ನು ಸುಟ್ಟು ಹಾಕಿಸಿದ್ದಾರೆ. ಸದ್ಯ ಗ್ರಾಮದ 8 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.