ತುಮಕೂರು: ತಿಪಟೂರು ಮದೀನ ವೃತ್ತದ ಗಾಂಧಿನಗರ 3ನೇ ಕ್ರಾಸ್ನಲ್ಲಿರುವ 24 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.
ತುಮಕೂರು ಮರಳೂರು ದಿಣ್ಣೆಯ 5 ಮಂದಿ, ತಿಪಟೂರಿನ ಒಬ್ಬ ವ್ಯಕ್ತಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ತಿಪಟೂರಿನ ವ್ಯಕ್ತಿ ಅಲ್ಲಿಂದ ದೆಹಲಿಗೆ ಹೋಗಿ, ವಿಶೇಷ ರೈಲಿನ ಮೂಲಕ ಮೇ 25ರಂದು ಬೆಳಿಗ್ಗೆ ಬೆಂಗಳೂರು ತಲುಪಿದ್ದರು. ಮೇ 26ರಂದು ಸರಕು ಸಾಗಣೆ ವಾಹನದ ಮೂಲಕ ತುಮಕೂರಿಗೆ ಬಂದಿದ್ದು, ರಾಜೀವ್ಗಾಂಧಿ ನಗರದ ಹಾಸ್ಟೆಲ್ನಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.
ಮೇ 29ರಂದು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬುಧವಾರ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 32ಕ್ಕೆ ಏರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.