ADVERTISEMENT

ವಿದೇಶದಿಂದ ಬಂದ ಯುವತಿ: ಆತಂಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 18:21 IST
Last Updated 24 ಮಾರ್ಚ್ 2020, 18:21 IST
ಪಕ್ಕದ ಆಂಧ್ರದ ಜನ ಮದ್ಯಪಾನಕ್ಕಾಗಿ ಐಡಿಹಳ್ಳಿ ಹೋಬಳಿ ವಿಠಲಾಪುರ ಗ್ರಾಮಕ್ಕೆ ಬರದಂತೆ ಯುವಕರು ರಸ್ತೆಯಲ್ಲಿ ಬೇಲಿ ಹಾಕಿದ್ದಾರೆ
ಪಕ್ಕದ ಆಂಧ್ರದ ಜನ ಮದ್ಯಪಾನಕ್ಕಾಗಿ ಐಡಿಹಳ್ಳಿ ಹೋಬಳಿ ವಿಠಲಾಪುರ ಗ್ರಾಮಕ್ಕೆ ಬರದಂತೆ ಯುವಕರು ರಸ್ತೆಯಲ್ಲಿ ಬೇಲಿ ಹಾಕಿದ್ದಾರೆ   

ಹುಳಿಯಾರು: ಪಟ್ಟಣದ ಯುವತಿಯೊಬ್ಬರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸೋಮವಾರ ಹಿಂದಿರುಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಮಂಗಳವಾರ ಆರೋಗ್ಯಾಧಿಕಾರಿ ಮನೆಗೆ ಬಂದು ಅವರ ಆರೋಗ್ಯ ತಪಾಸಣೆ ನಡೆಸಿದರು.

ಪಟ್ಟಣದ ಬಾಲಾಜಿ ಚಿತ್ರಮಂದಿರದ ಹಿಂಭಾಗ ವಾಸವಿರುವ ರಾಜಣ್ಣ ಅವರ ಪುತ್ರಿ ರಚನಾ ಜಪಾನ್‌ ದೇಶದ ಟೋಕಿಯೊದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ರಜೆ ನೀಡಿದ ಕಾರಣ ಭಾನುವಾರ ಬೆಂಗಳೂರಿಗೆ ಬಂದು ತನ್ನ ಅಕ್ಕ– ಬಾವನ ಜತೆ ಹುಳಿಯಾರಿಗೆ ಬಂದಿದ್ದಾರೆ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ವಿಷಯ ತಿಳಿದು ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದರು.

ADVERTISEMENT

‘ಯುವತಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್‌ ಮುದ್ರೆ ಹಾಕಿದ್ದಾರೆ. ನಮ್ಮ ತಂಡ ಸಹ ಪರೀಕ್ಷೆ ನಡೆಸಿದ್ದು, ಕೊರೊನಾ ವೈರಸ್‌ನ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಮುಂಜಾಗ್ರತೆ ಕ್ರಮವಾಗಿ ಮನೆಯಲ್ಲಿ ಯಾರ ಸಂಪರ್ಕಕ್ಕೂ ಒಳಪಡಬಾರದು ಹಾಗೂ ಹೊರಗೆ ಹೋಗದಂತೆ ತಿಳಿಸಲಾಗಿದೆ. ಮುಂದಿನ 14 ದಿನ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.