ತುಮಕೂರು: ತಿಪಟೂರಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚಾಮುಂಡಿ ಮದ್ಯದ ಅಂಗಡಿ ಮತ್ತು ಶೃಂಗಾರ ಹೋಟೆಲ್ ಬಳಿ ದಾಳಿ ನಡೆಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಿಪಟೂರು ಮಾವಿನ ತೋಪು ನಿವಾಸಿ ಮನ್ಸೂರ್ (33), ಗಾಂಧಿನಗರದ ರಫೀಕ್ (32), ಪ್ಯಾರಜಾನ್ (42) ಬಂಧಿತರು. ಇವರಿಂದ ₹ 5,600 ನಗದು ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಎಂ.ವಿ.ಶೇಷಾದ್ರಿ ಸಿಬ್ಬಂದಿ ಶಿವಶಂಕರಪ್ಪ, ಪರಮೇಶ್ ಕಾರ್ಯಾಚರಣೆಯ ತಂಡದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.