ತುಮಕೂರು: ತುಮಕೂರು ನಗರ ನೂತನ ಡಿಎಸ್ಪಿಯಾಗಿ ಎಚ್.ಜೆ.ತಿಪ್ಪೇಸ್ವಾಮಿ ಅವರು ಬುಧವಾರ ಅಧಿಕಾರವಹಿಸಿಕೊಂಡರು.
ಮಧ್ಯಾಹ್ನ ಡಿಎಸ್ಪಿ ಕಚೇರಿಯಲ್ಲಿ ಡಿಎಸ್ಪಿ ಕೆ.ಎಸ್.ನಾಗರಾಜ್ ಅವರು ಎಚ್.ಜೆ.ತಿಪ್ಪೇಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತಿಪ್ಪೇಸ್ವಾಮಿ ಅವರು ಬೆಂಗಳೂರು ಲೋಕಾಯುಕ್ತದಲ್ಲಿ ಡಿಎಸ್ಪಿಯಾಗಿದ್ದರು. ಕೆ.ಎಸ್.ನಾಗರಾಜ್ ಅವರಿಗೆ ಗೃಹ ಇಲಾಖೆ ಕೇಂದ್ರ ಕಚೇರಿಗೆ ವರ್ಗಾವಣೆಯಾಗಿದೆ.
‘ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಇಲ್ಲಿ ನಿರ್ವಹಿಸಿದ ಕರ್ತವ್ಯ ತೃಪ್ತಿ ತಂದಿದೆ. ಸಾರ್ವಜನಿಕರೂ ಅಷ್ಟೇ ಸಹಕಾರದಿಂದ ಸಹಕರಿಸಿದ್ದರು ಎಂದು ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.