ADVERTISEMENT

ಮತದಾನದ ದಿನ ದೇವೇಗೌಡ ಕ್ಷೇತ್ರ ಸಂಚಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 13:12 IST
Last Updated 18 ಏಪ್ರಿಲ್ 2019, 13:12 IST
ಹುಳಿಯಾರು ಹೋಬಳಿ ಲಕ್ಷ್ಮೀಪುರ ಗ್ರಾಮದಲ್ಲಿ ಕಾರ್ಯಕರ್ತರನ್ನು ದೇವೇಗೌಡ ಭೇಟಿ ಮಾಡಿದರು
ಹುಳಿಯಾರು ಹೋಬಳಿ ಲಕ್ಷ್ಮೀಪುರ ಗ್ರಾಮದಲ್ಲಿ ಕಾರ್ಯಕರ್ತರನ್ನು ದೇವೇಗೌಡ ಭೇಟಿ ಮಾಡಿದರು   

ಹುಳಿಯಾರು: ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿದ್ದರು.

ತಿಪಟೂರು ತಾಲ್ಲೂಕಿನಿಂದ ಮತ್ತಿಘಟ್ಟ ಮಾರ್ಗವಾಗಿ ಲಕ್ಷ್ಮೀಪುರ ಗ್ರಾಮದ ಮೂಲಕ ಹುಳಿಯಾರು ಪಟ್ಟಣಕ್ಕೆ ಬಂದರು. ಎಂಪಿಎಸ್ ಶಾಲೆ ಬಳಿ ಬಂದಾಗ ಕಾರ್ಯಕರ್ತರು ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದರು.

ಕಾರ್ಯಕರ್ತರಿಂದ ಅಭಿನಂದನೆ ಸ್ವಿಕರಿಸಿದರು. ನಂತರ ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವಿಕರಿಸಿ ತೆರಳಿದರು. ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಜತೆಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.