ADVERTISEMENT

ಆಯುಧಪೂಜೆ, ವಿಜಯದಶಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:29 IST
Last Updated 8 ಅಕ್ಟೋಬರ್ 2019, 15:29 IST
ಹುಳಿಯಾರು ಪಟ್ಟಣದ ನರಸಿಂಹಯ್ಯ ಎಂಬುವವರ ಹೋಟೆಲ್‌ ಕಾರ್ಮಿಕ ನಾಗರಾಜು ತಮ್ಮ ಬೈಕ್‌ಗೆ ಮಾಡಿದ್ದ ಅಲಂಕಾರ ಗಮನ ಸೆಳೆಯಿತು
ಹುಳಿಯಾರು ಪಟ್ಟಣದ ನರಸಿಂಹಯ್ಯ ಎಂಬುವವರ ಹೋಟೆಲ್‌ ಕಾರ್ಮಿಕ ನಾಗರಾಜು ತಮ್ಮ ಬೈಕ್‌ಗೆ ಮಾಡಿದ್ದ ಅಲಂಕಾರ ಗಮನ ಸೆಳೆಯಿತು   

ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಸೋಮವಾರ ಮತ್ತು ಮಂಗಳವಾರ ಆಚರಿಸಿದರು.

ಸೋಮವಾರ ಆಯುಧಪೂಜೆಯಂದು ತಮ್ಮ ವಾಹನಗಳನ್ನು ಶೃಂಗರಿಸಿಕೊಂಡು ಓಡಾಡುತ್ತಿದ್ದರು. ಉಳಿದಂತೆ ಮನೆಗಳಲ್ಲಿ ಹಿರಿಯರಿಗೆ ಎಡೆ ಹಾಕುವ ಮೂಲಕ ಹಬ್ಬ ಆಚರಿಸಲಾಯಿತು.

ಇನ್ನು ಮಂಗಳವಾರ ವಿಜಯದಶಮಿಯಂದು ಗಾಣಧಾಳು ಗ್ರಾಮದಲ್ಲಿ ಕಾರೇಹಳ್ಳಿ ರಂಗನಾಥಸ್ವಾಮಿ, ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ ಹಾಗೂ ಕರಿಯಮ್ಮ ದೇವಿ ಸೇರಿದಂತೆ ವಿವಿಧ ಗ್ರಾಮಗಳ ದೇಗುಲಗಳಲ್ಲಿ ಅಂಬಿನ ಸೇವೆ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.