ADVERTISEMENT

ಕಟಾವಿಗೆ ಬಂದ ರಾಗಿ ಮತದಾರರಿಗೆ!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 2:14 IST
Last Updated 18 ಡಿಸೆಂಬರ್ 2020, 2:14 IST
ರಾಗಿ ಕಟಾವು ಮಾಡದೆ ಹೊಲದಲ್ಲಿ ಬಿಡಲಾಗಿದೆ
ರಾಗಿ ಕಟಾವು ಮಾಡದೆ ಹೊಲದಲ್ಲಿ ಬಿಡಲಾಗಿದೆ   

ಗುಬ್ಬಿ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ಭರಾಟೆ ಹೆಚ್ಚಾಗಿದೆ. ಅಭ್ಯರ್ಥಿಗಳು ಗೆಲ್ಲಲು ಎಲ್ಲ ಕಸರತ್ತುಗಳನ್ನು ನಡೆಸಿದ್ದಾರೆ. ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬೆಳೆಯ ಕಟಾವು ಕಾಲವಾಗಿದ್ದರೂ ಚುನಾವಣೆಯಿಂದಾಗಿ ರೈತರು ಅದನ್ನು ನಿರ್ಲಕ್ಷಿಸಿ, ಚುನಾವಣೆಯಲ್ಲಿ ತೊಡಗಿದ್ದಾರೆ.

ವರ್ಷವಿಡಿ ಶ್ರಮವಹಿಸಿ ಬೆಳೆದ ರಾಗಿ ಬೆಳೆಯನ್ನು ಕೆಲವು ಅಭ್ಯರ್ಥಿಗಳು ಕಟಾವು ಮಾಡದೆ ಬಿಟ್ಟಿದ್ದಾರೆ. ತೆನೆಗಳು ಉದುರಿ ಬರಿ ಹುಲ್ಲು ಮಾತ್ರ ಉಳಿದಿದೆ.

ADVERTISEMENT

ಈ ಬಗ್ಗೆ ಅಭ್ಯರ್ಥಿಯನ್ನು ಕೇಳಿದರೆ, ‘ರಾಗಿಯನ್ನು ಮುಂದಿನ ವರ್ಷವೂ ಬೆಳೆಯಬಹುದು. ಆದರೆ ಚುನಾವಣೆಗೆ ಮತ್ತೆ ಐದು ವರ್ಷ ಕಾಯಬೇಕು. ಈ ಚುನಾವಣೆಯಲ್ಲಿ ಗೆಲುವು ಅತ್ಯಂತ ಮುಖ್ಯವಾಗಿದೆ. ಮತದಾರರು ಬೆಳೆ ಕಟಾವು ಮಾಡಿಕೊಳ್ಳು
ವುದಾದರೆ ಕೊಡಲು ಸಿದ್ಧನಿದ್ದೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.