ಕುಣಿಗಲ್: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಮಂಗಳವಾರ ಮುಂಜಾನೆ ಹೇಮಂತ್ ಕುಮಾರ್ ಅವರ ಮನೆ ಬೀಗ ಮುರಿದ ಕಳ್ಳರು 75 ಗ್ರಾಂ ಚಿನ್ನಾಭರಣ ಕದ್ದಿದ್ದಾರೆ.
ಅಂಚೇಪಾಳ್ಯದ ಸ್ಟೀಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಕುಮಾರ್ ಅವರ ತಂದೆ ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕಾಗಿ ಒಡಿಶಾಗೆ ಹೋಗಿದ್ದರು.
ಬೀಗ ಮುರಿದ ಕಳ್ಳರು ಮನೆಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಬಿಟ್ಟು ಚಿನ್ನಾಭರಣಗಳನ್ನು ಮಾತ್ರ ಕದ್ದಿದ್ದಾರೆ. ಕೃತ್ಯಕ್ಕೆ ಮೊದಲು ಅಕ್ಕಪಕ್ಕದ ಮನೆಗಳಿಗ ಚಿಲಕ ಹಾಕಿದ್ದಾರೆ.
ಮಾಲೀಕ ಹನುಮಂತಯ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.