ADVERTISEMENT

ಇಂಧನ ಉಳಿವಿಗೆ ಕೈಜೋಡಿಸಿ: ಎಂ.ಝಡ್. ಕುರಿಯನ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:47 IST
Last Updated 15 ಡಿಸೆಂಬರ್ 2021, 4:47 IST
ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನರ್ಜಿ ಕ್ಲಬ್ ವತಿಯಿಂದ ‘ರಾಷ್ಟ್ರೀಯ ಇಂಧನ ಶಕ್ತಿ ಸಂರಕ್ಷಣಾ ಜಾಗೃತಿ’ ಕಾರ್ಯಕ್ರಮ ಮಂಗಳವಾರ ನಡೆಯಿತು. ‘ಸಾಹೇ’ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ.ಝಡ್.ಕುರಿಯನ್, ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಎಂ.ಸಿದ್ದಪ್ಪ, ವೇಣುಗೋಪಲ್ ಇದ್ದರು
ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನರ್ಜಿ ಕ್ಲಬ್ ವತಿಯಿಂದ ‘ರಾಷ್ಟ್ರೀಯ ಇಂಧನ ಶಕ್ತಿ ಸಂರಕ್ಷಣಾ ಜಾಗೃತಿ’ ಕಾರ್ಯಕ್ರಮ ಮಂಗಳವಾರ ನಡೆಯಿತು. ‘ಸಾಹೇ’ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ.ಝಡ್.ಕುರಿಯನ್, ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಎಂ.ಸಿದ್ದಪ್ಪ, ವೇಣುಗೋಪಲ್ ಇದ್ದರು   

ತುಮಕೂರು: ಮುಂದಿನ ಪೀಳಿಗೆಗೆ ವಿದ್ಯುತ್ ಉಳಿಸಲುಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ನಿರ್ಲಕ್ಷ್ಯ ತೋರಿದರೆ ಮುಂದೆ ವಿದ್ಯುತ್ ಕ್ಷಾಮ ಉಂಟಾಗಲಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಂ.ಝಡ್. ಕುರಿಯನ್ ಎಚ್ಚರಿಸಿದರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಎನರ್ಜಿ ಕ್ಲಬ್’ ವತಿಯಿಂದ ಮಂಗಳವಾರ ಆರಂಭಗೊಂಡ ಒಂದು ವಾರದ ‘ರಾಷ್ಟ್ರೀಯ ಇಂಧನ ಶಕ್ತಿ ಸಂರಕ್ಷಣಾ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.

ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಬಂಕ್‍ಗಳು ಮುಚ್ಚಿ, ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುತ್ತದೆ. ಆಗ ಸಹಜವಾಗಿ ವಿದ್ಯುತ್‌ಗೆ ಬೇಡಿಕೆಯುಂಟಾಗುತ್ತದೆ. ಆದ್ದರಿಂದ ಇಂದಿನಿಂದಲೇ ವಿದ್ಯುತ್‍ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ADVERTISEMENT

ಆನ್‍ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಂಶುಪಾಲ ಎಂ.ಎಸ್. ರವಿಪ್ರಕಾಶ, ‘ಸುಖಾ ಸುಮ್ಮನೆ ಇಂಧನ ಅಥವಾ ವಿದ್ಯುತ್ ಶಕ್ತಿಯನ್ನು ಬಳಸಬಾರದು. ಶಕ್ತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಪರೀಕ್ಷಾಂಗ ಕುಲಸಚಿವ ಕರುಣಾಕರ್, ಡೀನ್ ಎಂ. ಸಿದ್ದಪ್ಪ, ವೇಣುಗೋಪಾಲ್, ಆಂತರಿಕ ಗುಣಮಟ್ಟ ಕೋಶ ಘಟಕದ ಮುಖ್ಯ ಸಂಚಾಲಕ ಆರ್. ಪ್ರಕಾಶ್, ಎನರ್ಜಿ ಕ್ಲಬ್‌ನ ಎಲ್. ಸಂಜೀವ್ ಕುಮಾರ್, ಸಂಚಾಲಕರಾದ ಎನ್. ಪ್ರದೀಪ್, ಜೆ. ಹರ್ಷ, ಜೆ. ಭರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.