ತುಮಕೂರು: ನಗರದ ಜಯನಗರ ಪೂರ್ವ 8ನೇ ಕ್ರಾಸ್ನಲ್ಲಿ ಮನೆಯೊಂದರ ಮುಂದೆ ನಿಲ್ಲಿಸಿದ್ದ ‘ಹೊಂಡಾ ಆ್ಯಕ್ಟಿವ್’ ದ್ವಿಚಕ್ರವಾಹನವನ್ನು ಗುರುವಾರ ಮಧ್ಯಾಹ್ನ ಕಳ್ಳತನ ಮಾಡಲಾಗಿದೆ.
ಜಯನಗರ ಪಶ್ಚಿಮ ಬಡಾವಣೆ ನಿವಾಸಿ ಸ್ವರ್ಣ ವಾಹನ ಕಳೆದುಕೊಂಡವರು. ಆ ದಿನ ಬೆಳಿಗ್ಗೆ 11.30ಕ್ಕೆ ಜಯನಗರ ಪೂರ್ವ 8ನೇ ಕ್ರಾಸ್ನಲ್ಲಿರುವ ಅವರ ತಾಯಿ ಮನೆಗೆ ತೆರಳಿದ್ದಾಗ ವಾಹನ ಕಳುವಾಗಿದೆ.
‘ತಾಯಿ ಮನೆ ಕೆಲಸ ಕಾರ್ಯ ಮುಗಿಸಿ ರಾತ್ರಿ 9ಕ್ಕೆ ವಾಹನ ತೆಗೆದುಕೊಳ್ಳಲು ಹೋದಾಗ ವಾಹನ ಇರಲಿಲ್ಲ. ಹುಡುಕಾಡಿದರೂ ವಾಹನ ಅವರಿಗೆ ಸಿಕ್ಕಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.