ADVERTISEMENT

ಸಾಂಸ್ಕೃತಿಕ ಪರಂಪರೆ ಮೆರೆದ ಕನಕದಾಸರು

ಜಿಲ್ಲೆಯ ವಿವಿಧೆಡೆ ಸರಳ, ಅರ್ಥಪೂರ್ಣ ಕನಕದಾಸ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:01 IST
Last Updated 4 ಡಿಸೆಂಬರ್ 2020, 7:01 IST
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಮುಖಂಡರಾದ ಬಿ.ಕೆ.ಮಂಜುನಾಥ್, ಲಕ್ಷ್ಮಿನರಸಿಂಹರಾಜು, ಮಂಜುನಾಥ್, ನಳಿನ ಇಂದ್ರಕುಮಾರ್, ಡಾ.ನಾಗೇಂದ್ರಪ್ಪ, ನಟರಾಜ್, ಎಸ್.ನಾಗಣ್ಣ, ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಮುಖಂಡರಾದ ಬಿ.ಕೆ.ಮಂಜುನಾಥ್, ಲಕ್ಷ್ಮಿನರಸಿಂಹರಾಜು, ಮಂಜುನಾಥ್, ನಳಿನ ಇಂದ್ರಕುಮಾರ್, ಡಾ.ನಾಗೇಂದ್ರಪ್ಪ, ನಟರಾಜ್, ಎಸ್.ನಾಗಣ್ಣ, ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು   

ತುಮಕೂರು: ಕನಕದಾಸರು ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಕೊಡುಗೆ ನೀಡಿದ್ದಾರೆ. ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ನಾಡಿನ ಸಾಂಸ್ಕೃತಿಕ ಪರಂಪರೆ ಮೆರೆದಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಅಭಿಪ್ರಾಯಪಟ್ಟರು.

ಜೆಡಿಎಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ವರ್ಣಾಶ್ರಮದ ವಿರುದ್ಧ, ಭಕ್ತಿ ಮಾರ್ಗದ ಮೂಲಕ ಧ್ವನಿ ಎತ್ತಿದರು. ಸಮಾನ ಸಮಾಜಕ್ಕಾಗಿ ಸಾಹಿತ್ಯದ ಮೂಲಕವೇ ಹೋರಾಡಿದ ದಾಸಶ್ರೇಷ್ಠರು. ಕನ್ನಡ ಸಾಹಿತ್ಯ, ಸಂಗೀತ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಸಮಸಮಾಜ ನಿರ್ಮಾಣಕ್ಕೆ ಕೀರ್ತನೆಗಳ ಮೂಲಕವೇ ಕನಕದಾಸರು ಅರಿವು ಮೂಡಿಸಿದರು’ ಎಂದರು.

ADVERTISEMENT

ಮಹಾನಗರಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯ ಎಚ್.ಡಿ.ಕೆ.ಮಂಜುನಾಥ್, ಜೆಡಿಎಸ್ ಮುಖಂಡರಾದ ಗಂಗಣ್ಣ, ಆರ್.ದೇವರಾಜು, ಕೃಷ್ಣಮೂರ್ತಿ, ತಾಹೆರಾ ಕುಲ್ಸುಮ್, ಪ್ರಸನ್ನ, ಜಯಶ್ರೀ, ಎಂ.ಎನ್.ಚಲುವರಾಜು, ಗೊಲ್ಲಹಳ್ಳಿ ಬಾಲಕೃಷ್ಣ, ಬೈರೇಶ್ ದಿಬ್ಬೂರು, ಮಧು, ಆಶಾ ವಿಜಿಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.