ADVERTISEMENT

ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:27 IST
Last Updated 18 ಫೆಬ್ರುವರಿ 2026, 6:27 IST
<div class="paragraphs"><p>ಕುಣಿಗಲ್ ತಾಲ್ಲೂಕು ಕಚೇರಿಯನ್ನು ಶಾಸಕ ಡಾ.ರಂಗನಾಥ್ ಸ್ವಚ್ಛಗೊಳಿಸಿದರು. ತಹಶೀಲ್ದಾರ್ ಕರಿಯಾ ನಾಯಕ್ ಇದ್ದರು</p></div>

ಕುಣಿಗಲ್ ತಾಲ್ಲೂಕು ಕಚೇರಿಯನ್ನು ಶಾಸಕ ಡಾ.ರಂಗನಾಥ್ ಸ್ವಚ್ಛಗೊಳಿಸಿದರು. ತಹಶೀಲ್ದಾರ್ ಕರಿಯಾ ನಾಯಕ್ ಇದ್ದರು

   

ಕುಣಿಗಲ್: ಶಾಸಕ ಡಾ.ರಂಗನಾಥ್ ಸೋಮವಾರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಮಯದಲ್ಲಿ ಕಚೇರಿಯ ಮೂರು ಅಂತಸ್ತಿನಲ್ಲಿ ಕಸ ಮತ್ತು ಧೂಳು ಕಂಡುಬಂದಿತ್ತು. ಮಂಗಳವಾರ ಮದ್ಯಾಹ್ನ ಕಚೇರಿಯ ಪ್ರಥಮ ಅಂತಸ್ತನ್ನು ಶಾಸಕರೇ ಗುಡಿಸಿ, ವರೆಸಿ ಶುಚ್ಛಗೊಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಚೇರಿ ಅಧಿಕಾರಿಗಳು ಕೆಲಸದ ಒತ್ತಡ ಹಾಗೂ ನಿರ್ಲಕ್ಷ್ಯದಿಂದ ಕಚೇರಿಯ ಸ್ವಚ್ಛತೆ ಮಾಯವಾಗಿದೆ. ನೌಕರರು ಮತ್ತು ಕಚೇರಿಗೆ ಸಮಸ್ಯೆ ಹೊತ್ತು ಬರುವ ನೂರಾರು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಗಮನಹರಿಸಲು ಪ್ರೇರಣೆ ನೀಡಲಾಗಿದೆ ಎಂದರು.

ADVERTISEMENT

ತಹಶೀಲ್ದಾರ್ ಕರಿಯಾ ನಾಯಕ್ ಸಾಥ್ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.