ಹೆಬ್ಬೂರು (ತುಮಕೂರು): ಗೂಳೂರು ಹೋಬಳಿಯ ಮುಳ್ಳುಕುಂಟೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ.
‘ಮೂರು ವರ್ಷದ ಈ ಹೆಣ್ಣು ಚಿರತೆ ಮರಿ ಹಾಕಿದೆ. ಅವುಗಳಿಗೆ ಹಾಲುಣಿಸುತ್ತಿದೆ. ಇಲಾಖೆಯಿಂದ ಮರಿಗಳನ್ನು ಹುಡುಕುತ್ತಿದ್ದೇವೆ. ಗೂಳೂರು ಮತ್ತು ಹೆಬ್ಬೂರು ವ್ಯಾಪ್ತಿಯಲ್ಲಿ ಮಾ.1ರಿಂದ ಇಲ್ಲಿಯವರೆಗೆ ಒಟ್ಟು ಆರು ಚಿರತೆಗಳು ಸೆರೆಯಾಗಿವೆ’ ಎಂದು ತುಮಕೂರು ವಲಯ ಅರಣ್ಯಾಧಿಕಾರಿ ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.