ADVERTISEMENT

ಮಠದ ಜಮೀನು ವಿವಾದ; ಸ್ವಾಮೀಜಿ ಮೇಲೆ ಹಲ್ಲೆ

ಒತ್ತುವರಿ ತೆರವಿಗೆ ಮುಂದಾದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:33 IST
Last Updated 30 ಜೂನ್ 2020, 9:33 IST
ಕುಣಿಗಲ್ ತಾಲ್ಲೂಕು ಆಲ್ಕರೆ ಸಿದ್ದಲಿಂಗೇಶ್ವರಮಠದಲ್ಲಿ ಶಾಂತಿ ಸಭೆ ನಡೆಯಿತು. ಶಿವಕುಮಾರ ಶಿವಾಚಾರ್ಯ, ಶಾಸಕ ಡಾ.ರಂಗನಾಥ್ ಇದ್ದರು
ಕುಣಿಗಲ್ ತಾಲ್ಲೂಕು ಆಲ್ಕರೆ ಸಿದ್ದಲಿಂಗೇಶ್ವರಮಠದಲ್ಲಿ ಶಾಂತಿ ಸಭೆ ನಡೆಯಿತು. ಶಿವಕುಮಾರ ಶಿವಾಚಾರ್ಯ, ಶಾಸಕ ಡಾ.ರಂಗನಾಥ್ ಇದ್ದರು   

ಕುಣಿಗಲ್: ತಾಲ್ಲೂಕಿನ ಆಲ್ಕೆರೆ ಸಿದ್ದಲಿಂಗೇಶ್ವರ ಮಠದ ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಗುಂಪು, ಸ್ವಾಮೀಜಿ ಮತ್ತು ಬೆಂಬಲಿಗರ ಮೇಲೆ ಹಲ್ಲೆ ನಡೆಸಿ ಮಠದ ಕಿಟಕಿ ಬಾಗಿಲುಗಳಿಗೆ ಕಲ್ಲು ತೂರಿ ಬೆದರಿಕೆ ಹಾಕಿದ ಘಟನೆ ಭಾನುವಾರ ನಡೆದಿದೆ.

ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಆಲ್ಕೆರೆ ಗ್ರಾಮದ ಸಿದ್ದಲಿಂಗೇಶ್ವರ ಮಠದ 18.30 ಎಕರೆ ಜಮೀನಿನಲ್ಲಿ ಸ್ವಲ್ಪ ಭಾಗ ಒತ್ತುವರಿಯಾಗಿದ್ದು, ಭಾನುವಾರ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ, ಆಲ್ಕೆರೆ ಗ್ರಾಮದ ಶಿವಣ್ಣ, ಗಂಗಾಧರ್, ಕೆಂಪಯ್ಯ, ನಾರಾಯಣ್, ರಂಗಮ್ಮ ರಾಮಣ್ಣ, ರಂಗಸ್ವಾಮಿ ಮತ್ತು ರಾಮಕೃಷ್ಣ ಅವರು ಆಕ್ಷೇಪ ವ್ಯಕ್ತಪಡಿಸಿದರು. ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

‘ಈ ಸಮಯದಲ್ಲಿ ನಮ್ಮ ಬೆಂಬಲಕ್ಕೆ ಬಂದ ಶಿವಪ್ರಕಾಶ್ ಮತ್ತು ಮಲ್ಲೇಗೌಡ ಹಾಗೂ ನಮ್ಮ ಮೇಲೆ ಹಲ್ಲೆ ನಡೆಸಿ, ಮಠದ ಕಿಟಕಿ ಬಾಗಿಲುಗಳಿಗೆ ಕಲ್ಲು ತೂರಿ ಹಾನಿಗೊಳಿಸಿದ್ದಾರೆ’ ಎಂದು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಸ್ವಾಮೀಜಿ ಮತ್ತು ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರ ಮೇಲೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಿ ಸಭೆ: ಈ ಬಗ್ಗೆ ಸೋಮವಾರ ಆಲ್ಕರೆ ಸಿದ್ದಲಿಂಗೇಶ್ವರ ಮಠದಲ್ಲಿ ಶಾಂತಿ ಸಭೆ ನಡೆಯಿತು. ಜಮೀನಿನ ಸರ್ವೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಡಿವೈಎಸ್ಪಿ ಜಗದೀಶ್, ಸಿಪಿಐ ನಿರಂಜನ್ ಕುಮಾರ್, ಪಿಎಸ್ಐ ವಿಕಾಸ್ ಗೌಡ, ಮುಖಂಡರಾದ ನಂಜಪ್ಪ, ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.