ADVERTISEMENT

ಹೊಸ ವರ್ಷಾಚರಣೆ ವೇಳೆ ಸಿಲಿಂಡರ್ ಬ್ಲಾಸ್ಟ್;  3  ಜನರಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 20:21 IST
Last Updated 31 ಡಿಸೆಂಬರ್ 2018, 20:21 IST
ಗಾಯಾಳುಗಳ ಸಂಬಂಧಿಕರು ರೋಧಿಸುತ್ತಿರುವುದು
ಗಾಯಾಳುಗಳ ಸಂಬಂಧಿಕರು ರೋಧಿಸುತ್ತಿರುವುದು   

ತುಮಕೂರು: ನಗರದ ಹೊರಪೇಟೆ ಲೂರ್ದ್ ಮಾತ್ ಚರ್ಚ್ ನಲ್ಲಿ ಹೊಸ ವರ್ಷಾಚರಣೆ ವೇಳೆ ಬಲೂನ್ ಗೆ ಗ್ಯಾಸ್ ತುಂಬುವ ಸಿಲಿಂಡರ್ ಸಿಡಿದು ಮೂವರಿಗೆ ತೀವ್ರ ಗಾಯಗಳಾಗಿವೆ.

ಚರ್ಚ್ ಮುಖ್ಯ ದ್ವಾರದ ಪಕ್ಕ ಬಲೂನ್ ಮಾರಾಟ ಮಾಡುವ ವ್ಯಕ್ತಿ ಸಿಲಿಂಡರ್ ಇಟ್ಟುಕೊಂಡಿದ್ದ. ಜನ ಚರ್ಚ್ ಒಳಗಡೆ ಹೋಗುತ್ತಿದ್ದ ವೇಳೆ ಸಿಲಿಂಡರ್ ಸಿಡಿದಿದೆ.

ಶಿರಾ ಗೇಟ್ ಬಡಾವಣೆಯ ಕಿರಣ್ (35), ಬಿದರಕುಂಟೆಯ ಮರಿಯಾದಾಸ್ (32), ಹಾಗೂ ಥಾಮಸ್ (30) ಗಾಯಗೊಂಡವರು. ಎಲ್ಲರನ್ನೂ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಸಿಲಿಂಡರ್ ಸ್ಪೋಟ್ ಗೊಳ್ಳುತ್ತಿದ್ದಂತೆಯೇ ಜನರು ದಿಕ್ಕಾಪಾಲದರು. ಗಾಯಗೊಂಡವರನ್ನು ಅಟೋದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.