ADVERTISEMENT

ದಾಳಿಕೋರನಿಗೂ ಸಿ.ಎಂಗೂ ವ್ಯತ್ಯಾಸವಿಲ್ಲ: ನಿರ್ಮಲಾ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:10 IST
Last Updated 14 ಏಪ್ರಿಲ್ 2019, 19:10 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ತುಮಕೂರು: ‘ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ನನಗೆ ಗೊತ್ತಿತ್ತು ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ರಕ್ಷಣಾ ಇಲಾಖೆಗೆ ಈ ಸಂಗತಿ ಗೊತ್ತಿರಲಿಲ್ಲವೇ’ ಎಂಬ ಪ್ರಶ್ನೆಗೆ ರಕ್ಷಣಾ ಸಿಚಿವೆ ನಿರ್ಮಲಾ ಸೀತಾರಾಮನ್ ಕ್ಷಣಕಾಲ ಬೆರಗಾದರು.

‘ಯಾರು, ಕರ್ನಾಟಕದ ಮುಖ್ಯಮಂತ್ರಿ ಆ ರೀತಿ ಹೇಳಿದ್ದಾರೆಯೆ! ಮುಖ್ಯಮಂತ್ರಿ ಹೇಳಿದ್ದಾರೆ ಎಂದರೆ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಖ್ಯಮಂತ್ರಿಗೆ ಎರಡು ವರ್ಷಗಳ ಹಿಂದೆಯೇ ದಾಳಿ ಬಗ್ಗೆ ತಿಳಿದಿದ್ದರೆ ದೇಶದ ರಕ್ಷಣೆ ದೃಷ್ಟಿಯಿಂದ ಗಮನಕ್ಕೆ ತರಬಹುದಿತ್ತು. ಎರಡು ವರ್ಷ ಸುಮ್ಮನೆ ಇದ್ದರು ಎಂದರೆ ಅವರಿಗೂ ಆತ್ಮಹತ್ಯಾ ದಾಳಿಕೋರನಿಗೂ ವ್ಯತ್ಯಾಸವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT