ADVERTISEMENT

‍ತುಮಕೂರು: ರೈತರನ್ನು ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 10:36 IST
Last Updated 15 ಏಪ್ರಿಲ್ 2022, 10:36 IST
ರೈತ ಮಹಿಳೆಯರನ್ನು ಬಲವಂತವಾಗಿ ಶುಕ್ರವಾರ ವಶಕ್ಕೆ ಪಡೆದ ಪೊಲೀಸರು
ರೈತ ಮಹಿಳೆಯರನ್ನು ಬಲವಂತವಾಗಿ ಶುಕ್ರವಾರ ವಶಕ್ಕೆ ಪಡೆದ ಪೊಲೀಸರು   

ತುಮಕೂರು: ಕುಣಿಗಲ್ ತಾಲ್ಲೂಕಿನ ಬಿಸೇಗೌಡನದೊಡ್ಡಿ ಕಲ್ಲು ಗಣಿಗಾರಿಕೆಯ ಕ್ರಷರ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್‌ ಪಟೇಲ್ ಮತ್ತು ರೈತ ಮಹಿಳೆಯರನ್ನು ಪೊಲೀಸರು ಬಲವಂತವಾಗಿ ಶುಕ್ರವಾರ ವಶಕ್ಕೆ ಪಡೆದರು.

ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಸ್ಪೋಟಕ ಮತ್ತು ಕಂಪನ ಪ್ರಮಾಣದ ಪರಿಶೀಲನೆಗೆ ತಜ್ಞರ ತಂಡ ಆಗಮಿಸಿತ್ತು. ತಜ್ಞರ ತಂಡದ ಪರಿಶೀಲನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದ ರೈತರು ಮತ್ತು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT