ADVERTISEMENT

ತುಮಕೂರು: ವಿದ್ಯುತ್ ಅನಧಿಕೃತ ಸಂಪರ್ಕಕ್ಕೆ ₹ 2ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 7:37 IST
Last Updated 5 ಸೆಪ್ಟೆಂಬರ್ 2020, 7:37 IST

ಕುಣಿಗಲ್: ಕಟ್ಟಡ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದ ಕಟ್ಟಡದ ಮೇಲೆ ದಾಳಿ ನಡೆಸಿದ ಬೆಸ್ಕಾಂ ಜಾಗೃತದಳದ ಅಧಿಕಾರಿಗಳು ಮಾಲೀಕನಿಗೆ ₹ 2ಲಕ್ಷ ದಂಡ ವಿದಿಸಿದ್ದಾರೆ.

ಪಟ್ಟಣದ ಕುವೆಂಪು ನಗರದಲ್ಲಿ ಲೋಕೇಶ್ ಅವರು ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಖಚಿತ ಮಾಹಿತಿ ಮೇರೆಗೆ ಬೆಸ್ಕಾಂ ಜಾಗೃತ ದಳ ಸಿಪಿಐ ರಾಧಾಕೃಷ್ಣ, ಪಿಎಸ್ಐ ಶಕುಂತಲಮ್ಮ, ಎಇಇ ರಾಮಕೃಷ್ಣ ಸಿಬ್ಬಂದಿ ಬಸವರಾಜು ಮತ್ತು ಪುರುಷೋತ್ತಮ್ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT