ADVERTISEMENT

ಪೂರ್ವಭಾವಿ ಸಭೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:08 IST
Last Updated 28 ಸೆಪ್ಟೆಂಬರ್ 2022, 5:08 IST
ತೋವಿನಕೆರೆಯ ಜೈನ ಭವನದಲ್ಲಿ ಸೋಮವಾರ ನಡೆದ ನೇಗಿಲ ಸಿದ್ಧು ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕಿ ಕೀರ್ತಿ ಪ್ರಭ ಉದ್ಘಾಟಿಸಿದರು
ತೋವಿನಕೆರೆಯ ಜೈನ ಭವನದಲ್ಲಿ ಸೋಮವಾರ ನಡೆದ ನೇಗಿಲ ಸಿದ್ಧು ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕಿ ಕೀರ್ತಿ ಪ್ರಭ ಉದ್ಘಾಟಿಸಿದರು   

ಮಧುಗಿರಿ: ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ಹೆಚ್ಚಿಸದ ಬಿಜೆಪಿ ನೇತೃತ್ವದ ಸರ್ಕಾರದ ನಡೆ ಖಂಡಿಸಿ ತಾಲ್ಲೂಕು ನಾಯಕ ಸಂಘದ ಪದಾಧಿಕಾರಿಗಳು ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪರಿಶಿಷ್ಟ ಪಂಗಡದ ಮುಖಂಡರು, ಸರ್ಕಾರದ ಧೋರಣೆ ಖಂಡಿಸಿದರು. ಸಭೆ ಬಹಿಷ್ಕರಿಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪುರಸಭೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ತಾಲ್ಲೂಕು ಆಡಳಿತದಿಂದ ಆಯೋಜಿಸಿರುವ ಸಭೆಯನ್ನು ಸಮುದಾಯದವರು ಸೇರಿದಂತೆ ಎಲ್ಲರೂ ಸೇರಿ ಬಹಿಷ್ಕರಿಸಿದ್ದೇವೆ. ರಾಜನಹಳ್ಳಿ ಸ್ವಾಮೀಜಿ ಅವರು ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವು 250ನೇ ದಿನಕ್ಕೆ ಸಮೀಪಿಸುತ್ತಿದೆ. ಆದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವಾಲ್ಮೀಕಿ ಜಯಂತಿ ದಿನದಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.

ADVERTISEMENT

ವಕೀಲ ಪಾಂಡುರಂಗಪ್ಪ, ಹನುಮಂತರಾಯಪ್ಪ, ಕಾರ್ಯದರ್ಶಿ ಶಂಕರನಾರಾಯಣ, ಜಿ.ಎಸ್. ಜಗದೀಶ್ ಕುಮಾರ್, ರಾಜೇಂದ್ರ ಬಾಬು, ನಾಗರಾಜು, ಗ್ರಾ.ಪಂ. ಸದಸ್ಯ ವೀರನರಸಿಂಹಯ್ಯ, ಮಂಜುನಾಥ್, ಯಲ್ಕೂರು ವಿಜಯ್, ಮೂರ್ತಿ, ರಾಜಣ್ಣ, ಲೋಕೇಶ್, ಚಂದ್ರಕಾಂತ್, ನಾಗಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.