ADVERTISEMENT

ಕುಣಿಗಲ್: ಆಗಸ್ಟ್‌ 20ರಿಂದ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 14:20 IST
Last Updated 17 ಆಗಸ್ಟ್ 2024, 14:20 IST

ಕುಣಿಗಲ್: ಪಟ್ಟಣದ ಮದ್ದೂರು ರಸ್ತೆಯ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 353ನೇ ಆರಾಧನಾ ಮಹೋತ್ಸವ ಆಗಸ್ಟ್‌ 20ರಿಂದ 22ರ ವರೆಗೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

18ರಂದು ಸಂಜೆ ಧ್ವಜಾರೋಹಣ, ಗೋಪೂಜೆ, ಲಕ್ಷ್ಮಿಪೂಜೆ, 19ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, 20ಕ್ಕೆ ಪೂರ್ವಾರಾಧನೆ, ಸಂಜೆ ವಿಷ್ಣು ಭಜನ ಮಂಡಳಿಯಿಂದ ಭಜನೆ, 21ರಂದು ಮದ್ಯಾರಾಧನೆ, ಶ್ರೀವಾರಿ ಭಜನೆ ಮಂಡಳಿಯಿಂದ ಭಜನೆ, 22ರಂದು ಉತ್ತರಾಧನೆ, ರಥೋತ್ಸವ, ಸಂಜೆ ಪದ್ಮಾ ಪ್ರಸಾದ್ ಮತ್ತು ಮಹಾಲಕ್ಷ್ಮೀ ಲಲಿತ ಕಲಾ ಸೇವಾ ಸಮಿತಿಯಿಂದ ಭಜನಾಮೃತ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT