ತಿಪಟೂರು: ತಾಲ್ಲೂಕಿನ ಆಲ್ಬೂರಿನಲ್ಲಿ ಮಳೆರಾಯನ ಪೂಜೆ ನಡೆಯಿತು.
ಊರಿನ ಪೂರ್ವಜರು ಬರಗಾಲ ಬಂದಾಗ 9 ದಿನ ಚಂದಮಾಮನ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥಿಸಿ, ಒಂಬತ್ತನೆಯ ದಿನ ಇಬ್ಬರು ಹೆಣ್ಣುಮಕ್ಕಳಿಗೆ ವಧು, ವರರ ವೇಷ ಹಾಕಿ ಮದುವೆ ಮಾಡಿ ಭಕ್ತಿಯಿಂದ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಅದರಂತೆ ಈ ವರ್ಷವೂ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಾಡಿಕೆಯಂತೆ ಮಳೆ ಬರುವ ನಿರೀಕ್ಷೆಯಲ್ಲಿ ಗ್ರಾಮಸ್ಥರು ಪ್ರಾರ್ಥಿಸಿದರು.
ಗ್ರಾಮಸ್ಥರಾದ ಅಶೋಕ್ ಎ.ಎನ್. ವಂದನ ಎ., ಪ್ರಕಾಶ್ ಭವಿತ, ಯಶ್ವಂತ್, ಹೇಮಂತ್, ನಂದೀಶ್, ರಮೇಶ್, ರೋಹಿಣಿ ಮಹಾಲಕ್ಷ್ಮಿ, ಪವನ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.