ADVERTISEMENT

ಸರ್ಕಾರದ ಪೋಸ್ಟರ್‌ಗಳಿಗೆ ಕೆಂಪು ಬಣ್ಣ

ಕಿಡಿಗೇಡಿಗಳಿಂದ ಕೆಲಸ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 14:20 IST
Last Updated 23 ಮಾರ್ಚ್ 2023, 14:20 IST
ತುಮಕೂರಿನಲ್ಲಿ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ಪೋಸ್ಟರ್‌ನಲ್ಲಿರುವ ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಬಣ್ಣ ಬಳಿಯಲಾಗಿದೆ
ತುಮಕೂರಿನಲ್ಲಿ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ಪೋಸ್ಟರ್‌ನಲ್ಲಿರುವ ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಬಣ್ಣ ಬಳಿಯಲಾಗಿದೆ   

ತುಮಕೂರು: ನಗದ ವಿವಿಧೆಡೆ ಸರ್ಕಾರದ ಯೋಜನೆಗಳನ್ನು ತಿಳಿಸುವ ಸಲುವಾಗಿ ಅಂಟಿಸಿದ್ದ ಪೋಸ್ಟರ್‌ಗಳಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಕೆಂಪು ಹಣ್ಣ ಬಳಿದಿದ್ದಾರೆ.

ಪೋಸ್ಟರ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಭಾವಚಿತ್ರಗಳಿಗೆ ಕೆಂಪು ಬಣ್ಣ ಹಚ್ಚಲಾಗಿದೆ.

ನಗರದ ಕೃಷಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮುಂಭಾಗ ಹಾಗೂ ಅಕ್ಕಪಕ್ಕದ ಕಾಂಪೌಂಡ್‍ಗಳ ಮೇಲೆ ಸರ್ಕಾರದ ವಿವೇಕ ಯೋಜನೆ, ರೈತ ವಿದ್ಯಾನಿಧಿ, ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಪೋಸ್ಟರ್‌ ಅಂಟಿಸಲಾಗಿತ್ತು. ಅದರಲ್ಲಿನ ಮಾಹಿತಿಯನ್ನು ಹಾಗೆ ಬಿಟ್ಟು, ನಾಯಕರು ಭಾವಚಿತ್ರಗಳು ಕಾಣಿಸದಂತೆ ಬಣ್ಣ ಬಳಿಯಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.