ADVERTISEMENT

ತುಮಕೂರು | ಪ್ರಜಾವಾಣಿ ವರದಿ ಪರಿಣಾಮ: ಹಾಪ್‌ಕಾಮ್ಸ್‌ ಮಳಿಗೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 6:24 IST
Last Updated 11 ನವೆಂಬರ್ 2023, 6:24 IST
ತುಮಕೂರಿನ ತೋಟಗಾರಿಕಾ ಇಲಾಖೆಯ ಪಕ್ಕದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಯನ್ನು ಮತ್ತೆ ತೆರೆಯಲಾಗಿದೆ
ತುಮಕೂರಿನ ತೋಟಗಾರಿಕಾ ಇಲಾಖೆಯ ಪಕ್ಕದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಯನ್ನು ಮತ್ತೆ ತೆರೆಯಲಾಗಿದೆ   

ತುಮಕೂರು: ನಗರದ ತೋಟಗಾರಿಕಾ ಇಲಾಖೆಯ ಪಕ್ಕದಲ್ಲಿ, ಬಿ.ಎಚ್.ರಸ್ತೆಗೆ ಹೊಂದಿಕೊಂಡಂತೆ ಇರುವ ಹಾಪ್‌ಕಾಮ್ಸ್ ಮಳಿಗೆಯನ್ನು ಮತ್ತೆ ಪ್ರಾರಂಭಿಸಲಾಗಿದೆ.

ತೋಟಗಾರಿಕಾ ಇಲಾಖೆಯಿಂದ ನಡೆಯುತ್ತಿದ್ದ ಮಳಿಗೆಯನ್ನು ಕಳೆದ ಹಲವು ತಿಂಗಳುಗಳಿಂದ ಮುಚ್ಚಲಾಗಿತ್ತು. ‘ರಸ್ತೆಯ ಕೆಳಭಾಗದಲ್ಲಿ ಮಳಿಗೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುತ್ತಿಲ್ಲ’ ಎಂಬ ಕಾರಣಕ್ಕೆ ಅಧಿಕಾರಿಗಳು ಹಾಪ್‌ಕಾಮ್ಸ್‌ ಮಳಿಗೆ ಬಂದ್ ಮಾಡಿದ್ದರು.

ನಗರದಲ್ಲಿ ‘ಬಾಗಿಲು ಮುಚ್ಚಿರುವ ಹಾಪ್‌ಕಾಮ್ಸ್‌ ಮಳಿಗೆ’ಗಳ ಕುರಿತು ‘ಪ್ರಜಾವಾಣಿ’ಯಲ್ಲಿ ಅ. 14ರಂದು ಸಮಗ್ರ ವರದಿ ಪ್ರಕಟವಾಗಿತ್ತು. ವರದಿಯ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತೆ ಹಾಪ್‌ಕಾಮ್ಸ್‌ ಮಳಿಗೆ ಶುರು ಮಾಡಿದ್ದಾರೆ. ಹಣ್ಣು, ತರಕಾರಿ ಮಾರಾಟ ಪುನಃ ಪ್ರಾರಂಭವಾಗಿದೆ.

ADVERTISEMENT

ವಿವಿಧೆಡೆ ಮುಚ್ಚಿರುವ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಮತ್ತೆ ಪ್ರಾರಂಭಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ನಗರದ ವಿವಿಧ ಕಡೆಗಳಲ್ಲಿ ಈಗಾಗಲೇ ಮುಚ್ಚಿದ್ದ, ಬಂದ್ ಮಾಡುವ ಹಂತದಲ್ಲಿದ್ದ ಮಳಿಗೆಗಳ ಪ್ರಾರಂಭಕ್ಕೆ ಅಧಿಕಾರಿಗಳು ಆಸಕ್ತಿ ತೋರುತ್ತಿದ್ದಾರೆ. ಹಾಪ್‌ಕಾಮ್ಸ್‌ ಮಳಿಗೆಗಳು ಮತ್ತೆ ಹಳೆಯ ಸ್ಥಿತಿಗೆ ಮರಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.