ADVERTISEMENT

ಶಾರ್ಟ್‌ ಸರ್ಕ್ಯೂಟ್‌ 7 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:37 IST
Last Updated 17 ಜನವರಿ 2021, 1:37 IST
ಫೋಟೋ 02 ಕುರಿಗಳು ಸತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟು ರೈತರಿಗೆ ಸಾಂತ್ವನ ಹೇಳುತ್ತಿರುವ ಬಿ ಜೆ ಪಿ ಮುಖಂಡ ಬೆಟ್ಟಸ್ವಾಮಿ
ಫೋಟೋ 02 ಕುರಿಗಳು ಸತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟು ರೈತರಿಗೆ ಸಾಂತ್ವನ ಹೇಳುತ್ತಿರುವ ಬಿ ಜೆ ಪಿ ಮುಖಂಡ ಬೆಟ್ಟಸ್ವಾಮಿ   

ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಲಕ್ಕೇನಹಳ್ಳಿಯ ಚಿಕ್ಕೀರಯ್ಯ, ರಮೇಶ, ರಾಜಣ್ಣ ಅವರಿಗೆ ಸೇರಿದ ಕುರಿಗಳು ಕೆರೆಯಲ್ಲಿ ನೀರು ಕುಡಿಯಲು ಹೋದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 7 ಕುರಿಗಳು ಸ್ಥಳದಲ್ಲೇ ಸತ್ತಿವೆ. 8 ಕುರಿಗಳು ಅಸ್ವಸ್ಥಗೊಂಡಿವೆ.

ಕೆರೆಯ ಬಳಿ ಎಳೆದಿರುವ ವಿದ್ಯುತ್ ತಂತಿಯ ತುಂಬಾ ಹಳೆಯದಾಗಿದ್ದು ಅದು ತುಂಡಾಗಿ ನೀರೊಳಗೆ ಬಿದ್ದಿರುವುದರಿಂದ ಈ ಅವಘಡ ಸಂಭವಿಸಿದೆ. ಅದನ್ನು ಸರಿಪಡಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಬಿಜೆಪಿಯ ಅಧ್ಯಕ್ಷ ಬೆಟ್ಟಸ್ವಾಮಿ ರೈತರಿಗೆ ಆಗಿರುವ ನಷ್ಟವನ್ನು ಬೆಸ್ಕಾಂ ಇಲಾಖೆಯೇ ಭರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.