ADVERTISEMENT

ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್‌ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 1 ಮೇ 2024, 12:19 IST
Last Updated 1 ಮೇ 2024, 12:19 IST
   

ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇ 2ರಿಂದ 31ರ ವರೆಗೆ ಉಚಿತವಾಗಿ ಕ್ಯಾನ್ಸರ್‌ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

‘ಭಯ ಬೇಡ-ಮುಂಜಾಗ್ರತೆ ಇರಲಿ’ ಎಂಬ ಘೋಷವಾಕ್ಯದೊಂದಿಗೆ ತಜ್ಞ ವೈದ್ಯರಿಂದ ಮಾಸಿಕ ಶಿಬಿರ ಆಯೋಜಿಸಲಾಗಿದೆ. ಚರ್ಮದಲ್ಲಿ ಗಡ್ಡೆ ಅಥವಾ ಊತ, ನೋವು, ಆಯಾಸ, ರಕ್ತಸ್ರಾವ, ನಿರಂತರ ಕೆಮ್ಮು, ಗಂಟಲಲ್ಲಿ ನುಂಗಲು ತೊಂದರೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಆಸಕ್ತರು ಮೊ.9886858553 ಸಂಪರ್ಕಿಸಬಹುದು ಎಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.