ADVERTISEMENT

ಸಚಿವ ಮಾಧುಸ್ವಾಮಿ ಹೇಳಿಕೆ ವಿರುದ್ಧ ಕರೆ ನೀಡಿದ್ದ ಹುಳಿಯಾರು ಬಂದ್ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 8:45 IST
Last Updated 21 ನವೆಂಬರ್ 2019, 8:45 IST
   

ತುಮಕೂರು: ಸಚಿವ ಮಾಧುಸ್ವಾಮಿ ಕನಕ ಶ್ರೀಗಳ ವಿರುದ್ಧ ಹಗುರುವಾಗಿ ಮಾತನಾಡಿದನ್ನು ವಿರೋಧಿಸಿ ಕುರುಬ ಸಮಾಜದ ಮುಖಂಡರು ಗುರುವಾರಕರೆ ನೀಡಿರುವ ಹುಳಿಯಾರು ಬಂದ್ ಶಾಂತಿಯುತವಾಗಿ ನಡೆದಿದೆ.

ಎಂದಿನಂತೆ ಬಸ್ ಸಂಚಾರ ಇದ್ದು,ಸುರಕ್ಷತೆ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಕೆಲ ಸಣ್ಣ ಪುಟ್ಟ ಅಂಗಡಿಗಳು ತೆಗೆದಿದ್ದವು. ಬ್ಯಾಂಕ್ ಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಮೊದಲೇ ನಿಗದಿಪಡಿಸಿದ್ದ ಮದುವೆ ಸಂಭ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT