ADVERTISEMENT

ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 1:13 IST
Last Updated 26 ಜನವರಿ 2021, 1:13 IST

ತುಮಕೂರು: ಮನೆಯ ಬಾಗಿಲು ಮುರಿದು ₹ 5.50 ಲಕ್ಷ ಮೌಲ್ಯದ ಚಿನ್ನಾಭರಣ, ಇತರ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಜಯನಗರ 1ನೇ ಮುಖ್ಯರಸ್ತೆಯ 2ನೇ ಕ್ರಾಸ್‌ನಲ್ಲಿ ನಡೆದಿದೆ.

ಆರ್. ಶಿವಲಿಂಗಯ್ಯ ಅವರು ಮನೆಗೆ ಬೀಗ ಹಾಕಿಕೊಂಡು ತಮ್ಮ ಪತ್ನಿ ಗಿರಿಜಮ್ಮ ಅವರೊಂದಿಗೆ ಜ. 23ರಂದು ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಮನೆಯ ಬಳಿ ಬಂದಿದ್ದ ಹರೀಶ್ ಎಂಬುವರು ಮನೆಯಲ್ಲಿ ಕಳ್ಳತನವಾಗಿರುವ ವಿಚಾರವನ್ನು ಶಿವಲಿಂಗಯ್ಯ ಗಮನಕ್ಕೆ ತಂದಿದ್ದಾರೆ. ಅವರು ಬೆಂಗಳೂರಿನಿಂದ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.

ಚೈನು, ನಾಲ್ಕು ಬಳೆ, ಉಂಗುರ, ಓಲೆ ಸೇರಿದಂತೆ 150 ಗ್ರಾಂ ಚಿನ್ನದ ಒಡವೆಗಳು, 500 ಗ್ರಾಂ ತೂಕದ ಬೆಳ್ಳಿ ಆಭರಣಗಳು, ಹೊಸದಾಗಿ ಮನೆಗೆ ತಂದಿಟ್ಟಿದ್ದ ಟಿ.ವಿ ಕಳವು ಮಾಡಲಾಗಿದೆ. ಮನೆಗೆ ಸಿ.ಸಿ ಟಿ.ವಿ ಅಳವಡಿಸಿದ್ದು, ಅದರ ಡಿವಿಆರ್ ‌ಅನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.