ADVERTISEMENT

ಬಗಿನಿಗೆರೆ: ಹಸುಗಳ ಕಳವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 6:51 IST
Last Updated 23 ಜುಲೈ 2023, 6:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕುದೂರು: ತಿಪ್ಪಸಂದ್ರ ಹೋಬಳಿಯ ಬಗಿನಿಗೆರೆ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ ಎರಡು ಸೀಮೆ ಹಸು ಹಾಗೂ ಒಂದು ಕರು ಕಳ್ಳತನವಾಗಿವೆ.

ಕೃಷ್ಣಪ್ಪ ಅವರು ರಾತ್ರಿ ವೇಳೆ ಹಸುಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಹಸುಗಳ ಕಳ್ಳತನವಾಗಿರುವುದು ತಿಳಿದಿದೆ.

ಗ್ರಾಮದೆಲ್ಲೆಡೆ ಹುಡುಕಿದಾಗ ಚಿಗಳೂರುನಲ್ಲಿ ಹಸುಗಳನ್ನು ವಧಿಸಿರುವ ಕಳ್ಳರು ಚರ್ಮ ಮತ್ತು ಮಾಂಸವನ್ನು ಕೊಂಡೊಯ್ದು, ಬೇಡದ್ದನ್ನು ಬಿಟ್ಟಿಹೋಗಿರುವುದು ತಿಳಿದಿದೆ.

ADVERTISEMENT

₹2 ಲಕ್ಷ ಬೆಲೆ ಬಾಳುವ ಹಸುಗಳು ನಾಪತ್ತೆಯಾಗಿವೆ ಎಂದು ರೈತ ಕೃಷ್ಣಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.