
ಕುಣಿಗಲ್: ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ. ವಿದ್ವಾಂಸರು ಎಲ್ಲೆಡೆ ಗೌರವಿಸಲ್ಪಡುತ್ತಾರೆ. ಶಿಕ್ಷಣಕ್ಕಾಗಿ ವಿದ್ಯಾರ್ಥಿ ಜೀವನ ಅರ್ಪಿಸಿ, ಜ್ಞಾನ ಸಂಪಾದನೆಗಾಗಿ ಅಧ್ಯಯನಶೀಲರಾಗಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿಯಿಂದ ಏರ್ಪಡಿಸಿದ್ದ ಇಗ್ನೈಟ್ 2025, ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವದ ಬಹುತೇಕ ಉದ್ದಿಮೆಗಳ ಸಿಇಒ ಗಳು ಭಾರತೀಯರಾಗಿದ್ದು, ಭಾರತದ ಯುವ ಪ್ರತಿಭೆಗೆ ವಿಶ್ವವೇ ಬೆರಗಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯ ದಾನಿಗಳ ನೆರವಿನಿಂದ ಮಧ್ಯಾಹ್ನದ ಉಪಹಾರ ಯೋಜನೆ ಜಾರಿಗೆ ತಂದಿದೆ. 5 ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಇಂಗ್ಲೆಂಡಿಗೆ ಕಳಿಸಿದೆ. ನವೋದ್ಯಮ ತರಬೇತಿ ಕೇಂದ್ರ ಪ್ರಾರಂಭಿಸಿ ಯುವಜನರಿಗೆ ಉದ್ಯಮ ಪ್ರಾರಂಭಿಸಿಲು ಸಹಕರಿಸಿದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎನ್.ನರಸಿಂಹಮೂರ್ತಿ, ವಾಣಿಜ್ಯಶಾಸ್ತ್ರ ಕಲಿತವರು ಜಾಗತಿಕ ಆರ್ಥಿಕತೆ, ನಾವೀನ್ಯತೆ, ವ್ಯಾಪಾರ, ಉದ್ದಿಮೆ, ಹಣಕಾಸು, ವಿಮೆ, ಮಾರುಕಟ್ಟೆ ಮತ್ತು ಸಂಪನ್ಮೂಲ ನಿರ್ವಹಣೆಯ ಜ್ಞಾನ ಅರಿತು ವಿಶ್ವದೆಲ್ಲೆಡೆ ಇರುವ ಅವಕಾಶ ಪಡೆಯಬಹುದು ಎಂದರು.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಿಮಾಲಯ ಪಬ್ಲಿಷಿಂಗ್ ಹೌಸ್ ನೀಡಿದ ಪಠ್ಯಪುಸ್ತಕ ನೀಡಲಾಯಿತು. ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲ ರಾಮಾಂಜನಪ್ಪ, ಆಂಗ್ಲ ವಿಭಾಗದ ಮುಖ್ಯಸ್ಥ ಸಿ.ಆರ್.ಮನೋಜ್, ಮ್ಯಾನೇಜರ್ ಚೆಲುವಮೂರ್ತೀ, ಸಿ.ಜಿ.ನಾಗಮಣಿ, ಮೋಜಿನಕುಮಾರ್, ಶಶಿಕಲ, ಬಬಿತ, ಮಂಜುಸ್ವಾಮಿ ನಾಗಮಣಿ ಬಿ.ಸುರೇಶ್, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.