ADVERTISEMENT

ಕುಣಿಗಲ್: ವಾಮಾಚಾರ ಮಾಡುತ್ತಿದ್ದ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನ ಭೀಕರ ಕೊಲೆ

ಕುಳ್ಳಿನಂಜಯ್ಯನ ಪಾಳ್ಯದ ಮರಿಯಪ್ಪ (40) ಹತ್ಯೆಯಾದ ಅತಿಥಿ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 4:59 IST
Last Updated 10 ಫೆಬ್ರುವರಿ 2024, 4:59 IST
<div class="paragraphs"><p>ಕುಳ್ಳಿನಂಜಯ್ಯನ ಪಾಳ್ಯದ ಮರಿಯಪ್ಪ (40) ಹತ್ಯೆಯಾದ ಅತಿಥಿ ಶಿಕ್ಷಕ</p></div>

ಕುಳ್ಳಿನಂಜಯ್ಯನ ಪಾಳ್ಯದ ಮರಿಯಪ್ಪ (40) ಹತ್ಯೆಯಾದ ಅತಿಥಿ ಶಿಕ್ಷಕ

   

ಕುಣಿಗಲ್: ಕುಣಿಗಲ್ ತಾಲ್ಲೂಕಿನ ಕುಳ್ಳಿ ನಂಜಯ್ಯನಪಾಳ್ಯದ ಬಳಿ ಶನಿವಾರ ಬೆಳಗಿನ ಜಾವ ಮಾರಕಾಸ್ತ್ರಗಳಿಂದ ಕೊಚ್ಚಿ ಸರ್ಕಾರಿ ಶಾಲೆ ಅತಿಥಿ ಶಿಕ್ಷಕರೊಬ್ಬರನ್ನು ಕೊಲೆ ಮಾಡಲಾಗಿದೆ.

ಕುಳ್ಳಿ ನಂಜಯ್ಯನಪಾಳ್ಯದ ಮರಿಯಪ್ಪ (40) ಹತ್ಯೆಯಾದ ಅತಿಥಿ ಶಿಕ್ಷಕ.

ADVERTISEMENT

ಕುಣಿಗಲ್ ತಾಲ್ಲೂಕಿನ ಮೋದುರು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ವಾಮಾಚಾರ ಪ್ರಯೋಗಗಳನ್ನು ಮಾಡುತ್ತಿದ್ದರು.

ಶುಕ್ರವಾರ ಅಮಾವಾಸ್ಯೆ ಪ್ರಯುಕ್ತ ವಾಮಾಚಾರ ಪ್ರಯೋಗಕ್ಕೆ ಹೋಗಿ ಬೈಕ್ ನಲ್ಲಿ ಸ್ವಗ್ರಾಮಕ್ಕೆ ವಾಪಸ್ ಬರುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿರುಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.