ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿ ಕ್ಯಾತಗಾನಚೆರ್ಲು ಗ್ರಾಮದ ಎರಡು ಮನೆಗಳಲ್ಲಿ ಕಳ್ಳತನವಾಗಿರುವುದು ಗುರುವಾರ ಬೆಳಕಿಗೆ ಬಂದಿದೆ.
ಕ್ಯಾತಗಾನಚೆರ್ಲು ಗ್ರಾಮದ ಸುವರ್ಣಮ್ಮ ಎಂಬುವರು ಸೋಮವಾರ ಬೆಂಗಳೂರಿಗೆ ಹೋಗಿದ್ದರು.ಈ ಸಮಯದಲ್ಲಿ ಮನೆಯ ಮೇಲ್ಚಾವಣಿಗೆ ಹೊದಿಸಿದ್ದ ಕರಿಬಂಡೆ ತೆಗೆದು ಕಳ್ಳರು ಮನೆಯೊಳಗೆ ಇಳಿದಿದ್ದಾರೆ. ಮನೆಯಲ್ಲಿದ್ದ 30 ಗ್ರಾಂ ಚಿನ್ನ ಹಾಗೂ ₹ 80 ಸಾವಿರ ನಗದು ಕಳವಾಗಿದೆ.
ಲಕ್ಷ್ಮಿದೇವಿ ಎಂಬುವರ ಮನೆ ಬಾಗಿಲು ಮುರಿದು ಕಳವಿಗೆ ಯತ್ನಿಸಲಾಗಿದೆ. ತಿರುಮಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.