ADVERTISEMENT

ತಿಪಟೂರು: ಸದ್ಯಕ್ಕೆ ನೀಗಿದ ನೀರಿನ ಬವಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:15 IST
Last Updated 18 ಆಗಸ್ಟ್ 2024, 14:15 IST
ರೈತರ ಹೊಲದಲ್ಲಿ ರಾಗಿ ಬೆಳೆ
ರೈತರ ಹೊಲದಲ್ಲಿ ರಾಗಿ ಬೆಳೆ   

ತಿಪಟೂರು: ತಾಲ್ಲೂಕಿನ ರೈತರ ಬದುಕಿನಲ್ಲಿ ಮಘೆ ಮಳೆ ಸಂತಸ ತಂದಿದೆ. ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ತಾಲೂಕಿನಲ್ಲಿ ಸರಾಸರಿ 21,400 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಕೈಗೊಂಡಿದ್ದು, ಆಗಸ್ಟ್ ಅಂತ್ಯಕ್ಕೆ 75 ಮಿ.ಮೀ ಮಳೆಯಾಗಬೇಕಿದೆ. ಸದ್ಯ 45ಕ್ಕೂ ಹೆಚ್ಚು ಮಿ.ಮೀ ಮಳೆಯಾಗಿದೆ. ರಾಗಿಯ ಬಿತ್ತನೆಗೆ ಸ್ವಲ್ಪ ವಿಳಂಬವಾದರೂ ಮುಂಗಾರಿನಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆಯು ಎಚ್ಚರವಹಿಸಿ ತಾಲೂಕಿನ ನಾಲ್ಕು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ರಾಗಿ ಬೀಜ ದಾಸ್ತಾನು ಮಾಡಿದೆ. ರೈತರಿಗೆ ಸಹಾಯಧನದಡಿ ಇಲಾಖೆಯಿಂದ 1,311 ಕ್ವಿಂಟಲ್ ರಾಗಿ ಬಿತ್ತನೆ ಬೀಜ ವಿತರಿಸಲಾಗಿದೆ. ರಸಗೊಬ್ಬರ ಪೂರೈಕೆಯಲ್ಲೂ ಕೊರತೆ ಆಗದಂತೆ ಎಚ್ಚರಿಕೆ ವಹಿಸಿತ್ತು.

ಮಳೆಯಿಂದಾಗಿ ರಾಗಿ ಎಲ್ಲ ರೈತರ ಹೊಲಗದ್ದೆಗಳಲ್ಲಿ ಹಸಿರಿನಿಂದ ನಳನಳಿಸುತ್ತಿದೆ. ಹಳ್ಳ ಕೊಳ್ಳ, ಬಾರೆ, ಹುಲ್ಲುಗಾವಲುಗಳಲ್ಲಿ ಕೃಷಿಗೆ ಪೂರಕ ವಾತಾವರಣವಿದ್ದು, ಹಳ್ಳ ಕೆರೆಕಟ್ಟೆಗಳಲ್ಲಿ ಸಮೃದ್ಧಿ ನೀರು ಹರಿಯುತ್ತಿದೆ.

ADVERTISEMENT

ಕುರಿ, ಮೇಕೆ, ಹಸು ಎಮ್ಮೆ, ಪಕ್ಷಿ ಸಂಕುಲ ಹಾಗೂ ಮುಂತಾದ ಜಾನುವಾರುಗಳಿಗೆ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ನೀಗಿದೆ.

ರೈತರ ಹೊಲದಲ್ಲಿ ರಾಗಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.