ADVERTISEMENT

ಟೋಲ್: ಸ್ಥಳೀಯರು– ಸಿಬ್ಬಂದಿ ನಡುವೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 14:04 IST
Last Updated 17 ಮೇ 2019, 14:04 IST

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರ ಶಿರಾ ತಾಲ್ಲೂಕಿನ ಕರೇಜವನಹಳ್ಳಿ ಟೋಲ್ ಗೇಟ್‌ನಲ್ಲಿ ಗುರುವಾರ ರಾತ್ರಿ ಟೋಲ್ ನೀಡುವ ವಿಚಾರದಲ್ಲಿ ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ನಡುವೆ ಜಗಳ ಪ್ರಾರಂಭವಾಗಿ ಪರಸ್ಪರ ಹಲ್ಲೆ ನಡೆದಿದೆ.

ತುಮಕೂರಿನಿಂದ ಶಿರಾಕ್ಕೆ ಕಾರಿನಲ್ಲಿ ಬರುತ್ತಿದ್ದ ಯುವಕರು ‘ನಾವು ಸ್ಥಳೀಯರು. ಆದ್ದರಿಂದ ಟೋಲ್ ನೀಡುವುದಿಲ್ಲ. ಪದೇ ಪದೇ ಟೋಲ್ ನೀಡಲು ಸಾಧ್ಯವಿಲ್ಲ’ ಎಂದು ಜಗಳ ತೆಗೆದಿದ್ದಾರೆ.

‘ಪ್ರತಿಯೊಬ್ಬರು ಟೋಲ್ ನೀಡಬೇಕು’ ಎಂದು ಸಿಬ್ಬಂದಿ ಪಟ್ಟು ಹಿಡಿದಾಗ ಮಾತಿನ ಚಕಮುಕಿ ಪ್ರಾರಂಭವಾಗಿದೆ. ಮಾತುಗಳು ವಿಕೋಪಕ್ಕೆ ಹೋಗಿ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ADVERTISEMENT

ಈ ಸಮಯದಲ್ಲಿ ಯುವಕರು ಟೋಲ್ ಸಂಗ್ರಹ ಕೇಂದ್ರದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಏನು ನಡೆಯುತ್ತಿದೆ ಎನ್ನುವುದು ತಿಳಿಯದಾಗಿ ಸ್ವಲ್ಪ ಸಮಯ ಯಾವುದೇ ವಾಹನಗಳು ಟೋಲ್ ನೀಡದೆ ರಸ್ತೆಯಲ್ಲಿ ಸಂಚರಿಸಿದವು. ಈ ಬಗ್ಗೆ ಗುರುವಾರ ಸಂಜೆವರೆಗೂ ಯಾವುದೇ ದೂರು ದಾಖಲಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.