ADVERTISEMENT

ಮರ ಕಡಿದವರ ಹಿಡಿದ ಪಾಲಿಕೆ ಸಿಬ್ಬಂದಿ

ವಾಲ್ಮೀಕಿನಗರದ ವಿನಾಯಕ ಉದ್ಯಾನದಲ್ಲಿನ ಮರಗಳಿಗೆ ಕೊಡಲಿ ಏಟು

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:09 IST
Last Updated 19 ಮೇ 2019, 11:09 IST
ಮರ ಕಡಿದ ಸ್ಥಳವನ್ನು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಪರಿಶೀಲಿಸಿದರು
ಮರ ಕಡಿದ ಸ್ಥಳವನ್ನು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಪರಿಶೀಲಿಸಿದರು   

ತುಮಕೂರು: ನಗರದ ಬಟವಾಡಿ ಬಡಾವಣೆಯ ವಾಲ್ಮೀಕಿ ನಗರದಲ್ಲಿನ ವಿನಾಯಕ ಮಕ್ಕಳ ಉದ್ಯಾನದಲ್ಲಿನ ನಾಲ್ಕುಬೃಹತ್ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದವರನ್ನು ಪಾಲಿಕೆಯ ಸಿಬ್ಬಂದಿಯೇ ಹಿಡಿದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೂರು ದಿನಗಳ ಹಿಂದೆ ರಾತ್ರೋ ರಾತ್ರಿ ಮರ ಕಡಿಯುತ್ತಿದ್ದವರನ್ನು ನಾಗರಿಕರ ಸಹಕಾರದಿಂದ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಟಾಟಾ ಎಸಿ ವಾಹನ, ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ರಫೀಕ್, ಸೈಫುಲ್ಲಾ ಎಂಬುವರ ವಿರುದ್ದ ಅರಣ್ಯ ಇಲಾಖೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ADVERTISEMENT

ವಿಷಯ ತಿಳಿಯುತ್ತಿದ್ದಂತೆಯೇ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಆರೋಗ್ಯ ಅಧಿಕಾರಿ ನಾಗೇಶ್‌ಕುಮಾರ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.