ADVERTISEMENT

ತುಮಕೂರು | ಬಸ್ ಸಂಚಾರ: ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 3:46 IST
Last Updated 4 ಜೂನ್ 2020, 3:46 IST
ತುಮಕೂರಿನಿಂದ ಹೊರಟ ಬಸ್‌ (ಸಂಗ್ರಹ ಚಿತ್ರ)
ತುಮಕೂರಿನಿಂದ ಹೊರಟ ಬಸ್‌ (ಸಂಗ್ರಹ ಚಿತ್ರ)   

ತುಮಕೂರು: ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗವು ‌ಜಿಲ್ಲಾ ವ್ಯಾಪ್ತಿಯಿಂದ ತಾಲ್ಲೂಕು ಕೇಂದ್ರಗಳಿಗೆ ಹಾಗೂ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ವಾಹನಗಳು ಸಂಚರಿಸುವ ಸಮಯ ನಿಗದಿಪಡಿಸಿದೆ.

ರಾತ್ರಿ 9ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬಸ್‌ಗಳು ಬೆಳಿಗ್ಗೆ 5ರಿಂದ ರಾತ್ರಿ 9ರ ವರೆಗೆ ಸಂಚರಿಸಲಿವೆ. ನಗರದಿಂದ ಬೆಂಗಳೂರಿಗೆ ಸಂಜೆ 7.30ಕ್ಕೆ ಕೊನೆ ಬಸ್ ಸಂಚರಿಸಲಿದೆ.

ಜಿಲ್ಲಾ ಕೇಂದ್ರದಿಂದ ತಿಪಟೂರಿಗೆ ಕೊನೆಯ ಬಸ್‌ ಸಂಜೆ 7.30, ಅಲ್ಲಿಂದ ತುಮಕೂರಿಗೆ ಸಂಜೆ 7ಕ್ಕೆ ಇರಲಿದೆ. ಕುಣಿಗಲ್‌ಗೆ ಸಂಜೆ 7.30 ಹಾಗೂ ಅಲ್ಲಿಂದ ಸಂಜೆ 7.15ಕ್ಕೆ, ತುರುವೇಕೆರೆಗೆ ಸಂಜೆ 6.30, ಅಲ್ಲಿಂದ ಸಂಜೆ 7ಕ್ಕೆ ಕೊನೆಯ ಬಸ್‌ ಸಂಚರಿಸಲಿದೆ.

ADVERTISEMENT

ತುಮಕೂರಿನಿಂದ ಚಿಕ್ಕನಾಯಕನಹಳ್ಳಿಗೆ ಕೊನೆಯ ಬಸ್‌ ಸಂಜೆ 7.15, ಅಲ್ಲಿಂದ ಸಂಜೆ 7ಕ್ಕೆ, ಶಿರಾಕ್ಕೆ ರಾತ್ರಿ 8, ಅಲ್ಲಿಂದ 7.30ಕ್ಕೆ, ಪಾವಗಡಕ್ಕೆ ಸಂಜೆ 7, ಅಲ್ಲಿಂದ ಸಂಜೆ 6.15, ಕೊರಟಗೆರೆಗೆ ಸಂಜೆ 7.30, ಅಲ್ಲಿಂದ ಸಂಜೆ 7.30ಕ್ಕೆ ಕೊನೆ ಬಸ್‌ ಇರಲಿದೆ.

ಮಧುಗಿರಿಗೆ ಸಂಜೆ 7.15, ಅಲ್ಲಿಂದ ಸಂಜೆ 7.15, ಗುಬ್ಬಿಗೆ ರಾತ್ರಿ 8, ಅಲ್ಲಿಂದ ಸಂಜೆ 7.30 ಕೊನೆ ಬಸ್‌ ಸಂಚರಿಸಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.